ಕಾರ್ಖಾನೆಯ ನಾಲ್ವರು ಸಿವಿಲ್ ಕಾರ್ಮಿಕರು ಶುಕ್ರವಾರ ಸಂಜೆ ತ್ಯಾಜ್ಯ ಹೊರ ಹೋಗುವ ತೊಟ್ಟಿ ಸ್ವಚ್ಛತೆ ಮತ್ತು ಯಂತ್ರದ ದುರಸ್ತಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿಷಾನಿಲ ಸೋರಿಕೆಯಾಗಿದ್ದು, ಅದನ್ನು ಸೇವಿಸಿದ ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. ಇವರ ರಕ್ಷಿಸಲು ಮುಂದಾದ ರುದ್ರಪ್ಪ ಕೂಡ ತೀವ್ರ ಅಸ್ವಸ್ಥರಾಗಿದ್ದಾರೆ. ಮತ್ತೊಬ್ಬ ಕಾರ್ಮಿಕನಿಗೆ ಯಾವುದೇ ಅನಾಹುತ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಹದಡಿ ಪೊಲೀಸರು ತಿಳಿಸಿದ್ದಾರೆ.