ಮಾಸ್ ಇಂಡಿಯಾ ಸೇವಾ ಸಮಿತಿಯ ಕರ್ನಾಟಕದ ಅಧ್ಯಕ್ಷ ಜಿ.ಎ.ಕೋಟೆಯಾರ್ ಮಾತನಾಡಿ, ಕಳೆದ ವರ್ಷ ನಗರಸಭೆ ನೀರಿಗಾಗಿ ₹ 95 ಲಕ್ಷ ಖರ್ಚು ಮಾಡಲಾಗಿದೆ ಎಂದು ಹೇಳಿಕೆ ಕೊಟ್ಟಿದೆ. ಕಳೆದ ಬಾರಿ ಕೊಡಂಕೂರು ವಾರ್ಡ್ಗೆ 5, 6 ಟ್ಯಾಂಕರ್ನಷ್ಟು ಮಾತ್ರ ನೀರು ಪೂರೈಕೆಯಾಗಿದೆ. ಇದನ್ನು ನೋಡಿದರೆ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವ ತಂತ್ರವಾಗಿರುವಂತೆ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಹೇಳಿದರು.