ಜೀವನಾನುಭವವು ಸೌಂದರ್ಯದ ಸ್ಪರ್ಶದಿಂದ ರಂಗದಲ್ಲಿ ರಸ ವಾಗುತ್ತದೆ. ಜೀವನದಲ್ಲಿ ನೋಯುವವರ ಬಗ್ಗೆ ಸಹಾನುಭೂತಿ ಇಲ್ಲದೆ ಶ್ರೇಷ್ಠ ಕಲೆ ಹುಟ್ಟಲು ಸಾಧ್ಯವಿಲ್ಲ. ಆ ಅರ್ಥದಲ್ಲಿ ರಂಗಭೂಮಿಯು ಜೀವನದ ಅನುಕರಣೆಯನ್ನು ಮೀರಿ ಜೀವನದ ವ್ಯಾಖ್ಯಾನವಾಗುತ್ತದೆ. ರಂಗಭೂಮಿ, ಅಥವಾ ಯಾವುದೇ ಕಲೆ, ಕರುಣ, ಅದ್ಭುತ, ಶೃಂಗಾರ ಸೇರಿದಂತೆ ವೀಕ್ಷಕರಲ್ಲಿ ರಸಾನುಭವವನ್ನು ಪ್ರಚೋದಿಸುವ ಪ್ರಕ್ರಿಯೆ ಎಂದರು.