ಉಡುಪಿ: ಚಿತ್ರದುರ್ಗದ ಜ್ಯೋತಿರಾಜ್ (ಕೋತಿ ರಾಜ್) ಗುರುವಾರ ಬ್ರಹ್ಮಗಿರಿಯಲ್ಲಿರುವ 25 ಅಂತಸ್ತಿನ ವುಡ್ಸ್ವಿಲ್ ಬಹುಮಹಡಿ ಕಟ್ಟಡವನ್ನು ಬರಿಗೈಲಿ ಯಶಸ್ವಿಯಾಗಿ ಹತ್ತಿದರು.
ಬೆಳಿಗ್ಗೆ 10.20ಕ್ಕೆ ಕಟ್ಟಡ ಹತ್ತಲು ಆರಂಭಿಸಿದ ಜ್ಯೋತಿರಾಜ್ 20 ನಿಮಿಷಗಳಲ್ಲಿ ಗುರಿ ಮುಟ್ಟಿದ್ದರು. ಕಟ್ಟಡದ ತುತ್ತತುದಿಯಲ್ಲಿ ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಿದರು. ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟಿ ಜ್ಯೋತಿರಾಜ್ಗೆ ಅಭಿನಂದನೆ ಸಲ್ಲಿಸಿದರು.
ಅಡ್ವೆಂಚರ್ ಮಂಕಿ ಕ್ಲಬ್ ಸ್ಥಾಪನೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಜ್ಯೋತಿರಾಜ್ ರಾಜ್ಯದೆಲ್ಲೆಡೆ ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.