ಸಬ್ ಜೂನಿಯರ್ ವಿಭಾಗ– ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್ ಪ್ರಥಮ ಮತ್ತು ಭಟ್ಕಳ ಎಚ್.ಎನ್.ನಿವಾಸ ಪಿನ್ನು ಪಾಲ್ ದ್ವಿತೀಯ ಬಹುಮಾನ ಪಡೆದಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ರಮೇಶ್ ದೇವಾಡಿಗ, ಮುತ್ತುರಾಜ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ, ಶಿರ್ವ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಪೊಲೀಸ್ ಇಲಾಖೆಯ ಶಶಿಧರ್ ಅವರು ವಿಜೇತ ಕೋಣಗಳ ಮಾಲೀಕರಿಗೆ ಮತ್ತು ಕೋಣ ಓಡಿಸಿದವರಿಗೆ ಬಹುಮಾನ ನೀಡಿ ಗೌರವಿಸಿದರು.
ಬ್ರಹ್ಮಾವರ: ಬಿಲ್ಲಾಡಿಯ ದೊಡ್ಮನೆ ಉದ್ಭವ ಮಹಾಗಣಪತಿ ಕೇಚರಾಹುತ ಸಾಂಪ್ರದಾಯಿಕ ಕಂಬಳ ಡಿ.16ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆ ತನಕ ನಡೆಯಲಿದೆ. ಉಡುಪಿ ಜಿಲ್ಲೆಯ ನಾನಾ ಭಾಗಗಳಿಂದ 50 ಜೊತೆಗಿಂತಲೂ ಹೆಚ್ಚು ಕೋಣಗಳು ಬರುವ ನಿರೀಕ್ಷೆ ಇದೆ ಎಂದು ಕಂಬಳ ಸಂಘಟಕ ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ ತಿಳಿಸಿದ್ದಾರೆ.