ಉಡುಪಿ:ಕಾಣಿಯೂರು ಮಠದಲ್ಲಿ ಕಾಷ್ಠಶಿಲ್ಪದ ಕೆತ್ತನೆಗಳಿಂದ ಕೂಡಿರುವ ಸಿಂಹಾಸನವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಣಿಯೂರು ಮೂಲ ಮಠದಿಂದ ತಂದ ತೇಗದಮರ, ಬೀಟೆ ಮರದಿಂದ ದಶಾವತಾರಗಳ ಮೂರ್ತಿಗಳು, ಮಧ್ವಾಚಾಚಾರ್ಯರು ವಾದಿರಾಜರ ಶಿಲ್ಪಗಳು ವಿಶಿಷ್ಟವಗಿ ಮೂಡಿಬಂದಿವೆ. ನರಸಿಂಹ ದೇವರಿಗೆ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಗಳು ಕೃಷ್ಣಾಪುರ ಶ್ರೀಗಳ ಮೂಲಕ ಅರ್ಪಣೆ ಮಾಡಿದ್ದಾರೆ.