ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ಮಾತನಾಡಿ, ‘ಕಾರ್ಗಿಲ್ ಗಡಿ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ಮಾಡುವ ಸಂದರ್ಭದಲ್ಲಿ ತನ್ನ ಬಲಗಾಲನ್ನೇ ಕಳೆದುಕೊಂಡರೂ ಕೃತಕ ಕಾಲಿನೊಂದಿಗೆ ಬಾಲಕೃಷ್ಣ ಟಿ. ಭಂಡಾರಿ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ಶಾಲೆ ವಿದ್ಯಾರ್ಥಿ ಆಗಿದ್ದಾಗಲೇ ಎನ್.ಸಿ.ಸಿಯಲ್ಲಿದ್ದು, ತುಂಬ ಆಸಕ್ತಿಯಿಂದ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು. ಆ ಮೇಲೆ ಭೂಸೇನೆಗೆ ಸೇರಿ ಅಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿ’ ಎಂದು ಕೊಂಡಾಡಿದರು.