<p>ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮದ ಹೆದ್ದಾರಿ ಬದಿಯಲ್ಲಿ ಕಸ ಎಸೆದಿದ್ದ ಕೊಪ್ಪಳ ಮೂಲದ ಪ್ರವಾಸಿಗ ರಿಗೆ ಸಾಣೂರು ಗ್ರಾಮ ಪಂಚಾಯಿತಿ ಆಡಳಿತವು ₹ 2 ಸಾವಿರ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.</p>.<p>ಎರಡು ವಾಹನಗಳಲ್ಲಿ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಪ್ರವಾಸಿಗರು ತಾವು ಊಟ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯೇ ಎಸೆದಿದ್ದರು. ಇದನ್ನು ಗಮನಿಸಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರು ದಂಡ ವಸೂಲಿಗೆ ಮುಂದಾಗುತ್ತಿದ್ದಂತೆ ‘ನಮ್ಮ ಕಡೆ ಈ ರೀತಿ ನಿಯಮವಿಲ್ಲ.ರಸ್ತೆ ಬದಿಯಲ್ಲಿ ಕಸ ಎಸೆದಂತೆ ಪಂಚಾಯಿತಿ ಸೂಚನಾ ಫಲಕ ಹಾಕಿದ್ದೀರಾ. ನಾವು ದಂಡ ಕೊಡುವುದಿಲ್ಲ. ನೀವು ಏನು ಬೇಕಾದರೂ ಮಾಡಿ ಎಂದು ದಂಡ ಕಟ್ಟುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ ಪಿಡಿಒ, ಪ್ರವಾಸಿಗರನ್ನು ಕಾರ್ಕಳ ನಗರ ಠಾಣೆಗೆ ಬರುವಂತೆ ಒಪ್ಪಿಸಿದರು.</p>.<p>ಪ್ರವಾಸಿಗರು ಗಲೀಜು ಮಾಡಿದ ಸ್ಥಳದ ಫೋಟೊ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಠಾಣೆಗೆ ದೂರು ಸಲ್ಲಿಸಿ, ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಲು ಒತ್ತಾಯಿಸಿದರು.</p>.<p>ಘಟನೆಗೆ ಗರಿಷ್ಠ ₹ 500 ದಂಡ ವಿಧಿಸುವ ಅಧಿಕಾರ ಐಪಿಸಿಯಲ್ಲಿದೆ ಎಂದು ತಿಳಿಸಿದ ಎಎಸ್ಐ ಮುರಳಿಧರ ನಾಯಕ್ ಅವರು, ಪಂಚಾಯಿತಿ ಮೂಲಕ ದಂಡ ವಿಧಿಸಲು ಸಲಹೆ ನೀಡಿದರು.</p>.<p>ಬಳಿಕ ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಅವರೊಡನೆ ಸಮಾಲೋಚನೆ ನಡೆಸಿ ದಂಡ ವಿಧಿಸಲಾಯಿತು.</p>.<p>ಈ ವೇಳೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಏರ್ನಡ್ಕ ವಿಶ್ವನಾಥ್ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-28-2029011589</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮದ ಹೆದ್ದಾರಿ ಬದಿಯಲ್ಲಿ ಕಸ ಎಸೆದಿದ್ದ ಕೊಪ್ಪಳ ಮೂಲದ ಪ್ರವಾಸಿಗ ರಿಗೆ ಸಾಣೂರು ಗ್ರಾಮ ಪಂಚಾಯಿತಿ ಆಡಳಿತವು ₹ 2 ಸಾವಿರ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.</p>.<p>ಎರಡು ವಾಹನಗಳಲ್ಲಿ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಪ್ರವಾಸಿಗರು ತಾವು ಊಟ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯೇ ಎಸೆದಿದ್ದರು. ಇದನ್ನು ಗಮನಿಸಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರು ದಂಡ ವಸೂಲಿಗೆ ಮುಂದಾಗುತ್ತಿದ್ದಂತೆ ‘ನಮ್ಮ ಕಡೆ ಈ ರೀತಿ ನಿಯಮವಿಲ್ಲ.ರಸ್ತೆ ಬದಿಯಲ್ಲಿ ಕಸ ಎಸೆದಂತೆ ಪಂಚಾಯಿತಿ ಸೂಚನಾ ಫಲಕ ಹಾಕಿದ್ದೀರಾ. ನಾವು ದಂಡ ಕೊಡುವುದಿಲ್ಲ. ನೀವು ಏನು ಬೇಕಾದರೂ ಮಾಡಿ ಎಂದು ದಂಡ ಕಟ್ಟುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ ಪಿಡಿಒ, ಪ್ರವಾಸಿಗರನ್ನು ಕಾರ್ಕಳ ನಗರ ಠಾಣೆಗೆ ಬರುವಂತೆ ಒಪ್ಪಿಸಿದರು.</p>.<p>ಪ್ರವಾಸಿಗರು ಗಲೀಜು ಮಾಡಿದ ಸ್ಥಳದ ಫೋಟೊ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಠಾಣೆಗೆ ದೂರು ಸಲ್ಲಿಸಿ, ಪ್ರವಾಸಿಗರ ಮೇಲೆ ಎಫ್ಐಆರ್ ದಾಖಲಿಸಲು ಒತ್ತಾಯಿಸಿದರು.</p>.<p>ಘಟನೆಗೆ ಗರಿಷ್ಠ ₹ 500 ದಂಡ ವಿಧಿಸುವ ಅಧಿಕಾರ ಐಪಿಸಿಯಲ್ಲಿದೆ ಎಂದು ತಿಳಿಸಿದ ಎಎಸ್ಐ ಮುರಳಿಧರ ನಾಯಕ್ ಅವರು, ಪಂಚಾಯಿತಿ ಮೂಲಕ ದಂಡ ವಿಧಿಸಲು ಸಲಹೆ ನೀಡಿದರು.</p>.<p>ಬಳಿಕ ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಅವರೊಡನೆ ಸಮಾಲೋಚನೆ ನಡೆಸಿ ದಂಡ ವಿಧಿಸಲಾಯಿತು.</p>.<p>ಈ ವೇಳೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಏರ್ನಡ್ಕ ವಿಶ್ವನಾಥ್ ಶೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-28-2029011589</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>