<p>ಕಾರ್ಕಳ: ಸ್ವ ಉದ್ಯೋಗಕ್ಕೆ ಹೆಚ್ಚು ಉತ್ತೇಜನ ಸಿಗಬೇಕು. ನಮ್ಮ ಊರಿನ ಹೆಸರನ್ನು ನಮ್ಮ ಉತ್ಪನ್ನದ ಜೊತೆಗೆ ಸೇರಿಸಿ ಊರಿನ ಹೆಸರನ್ನು ಪ್ರಖ್ಯಾತಿ ಗೊಳಿಸಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.</p>.<p>ಇಲ್ಲಿನ ಪೆರ್ವಾಜೆಯ ಬಿಲ್ಲವ ಸಮಾಜ ಸೇವಾ ಸಂಘ, ರೋಟರಿ ಕ್ಲಬ್, ಯುವವಾಹಿನಿ ಕಾರ್ಕಳ ಘಟಕ, ಎನ್.ಪಿ. ಗ್ರೂಪ್ಸ್, ವಂಶಿ ಇವೆಂಟ್ಸ್ ಮತ್ತು ಬೆನಕ ಇವೆಂಟ್ಸ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಹಲಸಿನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉದ್ಯಮಿ ನಿತ್ಯಾನಂದ ಪೈ ಮಾತನಾಡಿ, ಸ್ವ ಉದ್ಯೋಗಕ್ಕೆ ಒತ್ತು ಕೊಟ್ಟಾಗ ಗ್ರಾಮೀಣ ಆಹಾರ ಬೆಳಕಿಗೆ ಬರುತ್ತದೆ ಎಂದರು.</p>.<p>ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ಥ್ ಮಾತನಾಡಿ, ಆಧುನಿಕ ಆಹಾರವು ಸಾಂಪ್ರದಾಯಿಕ ಆಹಾರವನ್ನು ನಾಶ ಮಾಡಿದೆ. ಹಲಸು ಮೇಳದಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿವೆ ಎಂದರು.</p>.<p>ರೋಟರಿ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ, ಎನ್ಪಿ ಗ್ರೂಪ್ ಮಾಲೀಕ ವಾಸುದೇವ್ ಭಟ್, ಯುವವಾಹಿನಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬೆನಕ ಇವೆಂಟ್ಸ್ ಮಾಲೀಕ ಗಣೇಶ್ ಶೆಟ್ಟಿ ಮಾಹಿತಿ ನೀಡಿದರು.</p>.<p>ಸಾಮಾಜಿಕ ಕಾರ್ಯಕರ್ತೆ ವಂಶಿ ಇವೆಂಟ್ಸ್ನ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.</p>.<p>ಯುವವಾಹಿನಿ ಘಟಕದ ನಿಕಟ ಪೂರ್ವಾಧ್ಯಕ್ಷೆ ಮಮತಾ ಪೂಜಾರಿ ವಂದಿಸಿದರು. ಹಿತಾ ನಿರೂಪಿಸಿದರು. ಪ್ರಾರ್ಥನಾ ಹಾಡಿದರು.</p>.<p>ಹಲಸಿನ ಜಿಲೇಬಿ, ಕೇರಳದ ಅಲೆಪ್ಪಿಯಿಂದ ಬಂದಿರುವ 60ಕ್ಕೂ ಹೆಚ್ಚು ಹಲಸಿನ ತಿಂಡಿಗಳು ವಿಶೇಷ ಆಕರ್ಷಣೆಯಾಗಿದ್ದವು.ಐಸ್ ಕ್ರೀಮ್, ಮುಲ್ಕ, ಗೋಬಿಮಂಚೂರಿ, ಹಲ್ವಾ, ಕಡಬು, ಪೋಡಿ, ಪಾಯಸ, ಹಲಸಿನ ಹಣ್ಣಿನ ಬೀಜದ ಪತ್ರೊಡೆ, ಖಾದಿ ಉತ್ಪನ್ನಗಳು ಗಮನ ಸೆಳೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-28-646455903</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಕಳ: ಸ್ವ ಉದ್ಯೋಗಕ್ಕೆ ಹೆಚ್ಚು ಉತ್ತೇಜನ ಸಿಗಬೇಕು. ನಮ್ಮ ಊರಿನ ಹೆಸರನ್ನು ನಮ್ಮ ಉತ್ಪನ್ನದ ಜೊತೆಗೆ ಸೇರಿಸಿ ಊರಿನ ಹೆಸರನ್ನು ಪ್ರಖ್ಯಾತಿ ಗೊಳಿಸಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.</p>.<p>ಇಲ್ಲಿನ ಪೆರ್ವಾಜೆಯ ಬಿಲ್ಲವ ಸಮಾಜ ಸೇವಾ ಸಂಘ, ರೋಟರಿ ಕ್ಲಬ್, ಯುವವಾಹಿನಿ ಕಾರ್ಕಳ ಘಟಕ, ಎನ್.ಪಿ. ಗ್ರೂಪ್ಸ್, ವಂಶಿ ಇವೆಂಟ್ಸ್ ಮತ್ತು ಬೆನಕ ಇವೆಂಟ್ಸ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಹಲಸಿನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉದ್ಯಮಿ ನಿತ್ಯಾನಂದ ಪೈ ಮಾತನಾಡಿ, ಸ್ವ ಉದ್ಯೋಗಕ್ಕೆ ಒತ್ತು ಕೊಟ್ಟಾಗ ಗ್ರಾಮೀಣ ಆಹಾರ ಬೆಳಕಿಗೆ ಬರುತ್ತದೆ ಎಂದರು.</p>.<p>ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ಥ್ ಮಾತನಾಡಿ, ಆಧುನಿಕ ಆಹಾರವು ಸಾಂಪ್ರದಾಯಿಕ ಆಹಾರವನ್ನು ನಾಶ ಮಾಡಿದೆ. ಹಲಸು ಮೇಳದಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿವೆ ಎಂದರು.</p>.<p>ರೋಟರಿ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ, ಎನ್ಪಿ ಗ್ರೂಪ್ ಮಾಲೀಕ ವಾಸುದೇವ್ ಭಟ್, ಯುವವಾಹಿನಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬೆನಕ ಇವೆಂಟ್ಸ್ ಮಾಲೀಕ ಗಣೇಶ್ ಶೆಟ್ಟಿ ಮಾಹಿತಿ ನೀಡಿದರು.</p>.<p>ಸಾಮಾಜಿಕ ಕಾರ್ಯಕರ್ತೆ ವಂಶಿ ಇವೆಂಟ್ಸ್ನ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.</p>.<p>ಯುವವಾಹಿನಿ ಘಟಕದ ನಿಕಟ ಪೂರ್ವಾಧ್ಯಕ್ಷೆ ಮಮತಾ ಪೂಜಾರಿ ವಂದಿಸಿದರು. ಹಿತಾ ನಿರೂಪಿಸಿದರು. ಪ್ರಾರ್ಥನಾ ಹಾಡಿದರು.</p>.<p>ಹಲಸಿನ ಜಿಲೇಬಿ, ಕೇರಳದ ಅಲೆಪ್ಪಿಯಿಂದ ಬಂದಿರುವ 60ಕ್ಕೂ ಹೆಚ್ಚು ಹಲಸಿನ ತಿಂಡಿಗಳು ವಿಶೇಷ ಆಕರ್ಷಣೆಯಾಗಿದ್ದವು.ಐಸ್ ಕ್ರೀಮ್, ಮುಲ್ಕ, ಗೋಬಿಮಂಚೂರಿ, ಹಲ್ವಾ, ಕಡಬು, ಪೋಡಿ, ಪಾಯಸ, ಹಲಸಿನ ಹಣ್ಣಿನ ಬೀಜದ ಪತ್ರೊಡೆ, ಖಾದಿ ಉತ್ಪನ್ನಗಳು ಗಮನ ಸೆಳೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-28-646455903</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>