ದೇವಾಲಯದ ಸಂಪತ್ತು ದೇವಾಲಯಗಳಿಗೆ ವಿನಿಯೋಗ: ಮುಜರಾಯಿ ಇಲಾಖೆ ವ್ಯಾಪ್ತಿಯ ‘ಎ’ ದರ್ಜೆಯ ದೇವಸ್ಥಾನಗಳ ಸಂಪತ್ತನ್ನು ಬಡ ದೇವಾಲಯಗಳಿಗೆ, ಮಠ ಮಂದಿರಗಳಿಗೆ ಮುಟ್ಟಿಸುವ ಕಾರ್ಯ ಹಿಂದಿನ ಸರ್ಕಾರದಲ್ಲಿ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ದೇವಾಲಯಗಳ ಸಂಪತ್ತನ್ನು ದೇವಾಲಯಗಳಿಗೆ, ಮಠ ಮಂದಿರಗಳಿಗೆ ಮುಟ್ಟಿಸುವ ಕಾಳಜಿ ತೋರುತ್ತಿದೆ. ಕಾಶಿಯಾತ್ರೆಗೆ ಧನ ಸಹಾಯವನ್ನೂ ಮಾಡುತ್ತಿದೆ ಎಂದು ಶ್ಲಾಘಿಸಿದರು.