ಕುಂಕುಮಾರ್ಚನೆ, ತುಪ್ಪದ ಆರತಿ, ಭಸ್ಮಾರ್ಚನೆ, ಲಾಡು, ಪ್ರಸಾದ, ಅಲಂಕಾರ ಪೂಜೆ, ತುಲಾಭಾರ, ಬೆಳ್ಳಿ, ಚಿನ್ನದ ರಥೋತ್ಸವ ಸೇರಿದಂತೆ ಎಲ್ಲ ಸೇವೆಗಳು ಪ್ರಾರಂಭವಾಗಲಿದೆ. ಭಕ್ತರಿಗೆ ಮಧ್ಯಾಹ್ನದ ಪ್ರಸಾದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ರಾತ್ರಿ ಪ್ರಸಾದ ಇಲ್ಲ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ ತಿಳಿಸಿದ್ದಾರೆ.