‘ನಾನು ಮೀನುಗಾರಿಕಾ ಸಚಿವನಾಗಿದ್ದ ವೇಳೆ ನನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರು ಬಂದರು ನಿರ್ಮಾಣಕ್ಕಾಗಿ ₹181 ಕೋಟಿ ಅನುದಾನ ಬಿಡುಗಡೆ ಮಾಡಿ, ಮುಖ್ಯಮಂತ್ರಿಗಳಿಂದ ಶಿಲಾನ್ಯಾಸವನ್ನು ಮಾಡಲಾಗಿತ್ತು. ಹಲವು ಕಾರಣಗಳಿಂದಾಗಿ ವಿಳಂಭವಾಗಿದ್ದ ಕೋಡಿ ಕನ್ಯಾಣದಲ್ಲಿನ ಮೀನುಗಾರಿಕಾ ಜಟ್ಟಿಯ ಹೂಳೆತ್ತುವ ಕಾಮಗಾರಿಗೆ ಸಚಿವ ಅಂಗಾರ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕರಾವಳಿ ಶಾಸಕರ ಮನವಿ ಮೇರೆಗೆ ₹ 60 ಕೋಟಿ ಮಹಿಳಾ ಮೀನುಗಾರರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ 22,000 ಮಂದಿಗೆ ಉಪಯೋಗವಾಗಿದೆ. ತಾಂತ್ರಿಕ ಕಾರಣದಿಂದ ಯೋಜನೆಯಿಂದ ವಂಚಿತ ರಾದವರಿಗೂ ಯೋಜನೆ ಉಪಯೋಗ ದೊರಕಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.