<p>ಬ್ರಹ್ಮಾವರ: ಕುಂದಾಪುರ ಭಾಗದವರು ತಮ್ಮೂರಿನಲ್ಲಿ ಇದ್ದಾಗ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಾರೆ. ಅವರ ಸಾಧನೆಗಳ ತಿಳಿಯುವುದೇ ಅವರು ಬೇರೆ ಊರಿನಲ್ಲಿದ್ದಾಗ ಎಂದು ಮಂಗಳೂರಿನ ವೈದ್ಯ ಅಣ್ಣಯ್ಯ ಕುಲಾಲ್ ಹೇಳಿದರು.</p>.<p>ಕೋಟದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಗೀತಾನಂದ ಫೌಂಡೇಶನ್, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರಿನ ಪುಟ್ಟಣ ಕುಲಾಲ್ ಪ್ರತಿಷ್ಠಾನ ಮತ್ತು ಕೋಟತಟ್ಟು ಅರಿವು ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ನಡೆದ ಆರನೇ ಕುಂದಾಪುರ ಕನ್ನಡ ಸಾಹಿತ್ಯ ಸಮ್ಮೇಳನ ‘ಕಾಂಬ’ವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಮಂಗಳೂರಿನಲ್ಲಿ ಬಹುತೇಕ ಮುಂಚೂಣಿಯಲ್ಲಿ ಇರುವವರು ಕುಂದಾಪುರದವರು. ಅಲ್ಲಿನ ಖ್ಯಾತ ವೈದ್ಯರು, ಲೆಕ್ಕಪರಿಶೋಧಕರು ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಮೂಲತಃ ಕುಂದಾಪುರದವರು. ಇಲ್ಲಿನವರ ಮುಖ್ಯ ಗುಣವೆಂದರೆ ತಮ್ಮೊಂದಿಗೆ ಬಂದವರನ್ನು ಎಂದಿಗೂ ಕೈ ಬಿಡುವುದಿಲ್ಲ. ನಂಬಿ ಬಂದವರನ್ನು ಬೆಳೆಸುವುದೇ ಅವರ ಯಶಸ್ಸಿನ ಗುಟ್ಟು ಎಂದರು.</p>.<p>ಈ ಬಾರಿಯ ಸಮ್ಮೇಳನಾಧ್ಯಕ್ಷರನ್ನು ಚೇತನ್ ನೈಲಾಡಿ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದು ಎಲ್ಲರಿಗೂ ಮಾದರಿ. ಸಮ್ಮೇಳನಾಧ್ಯಕ್ಷರಿಗೆ ಯಾವುದೇ ಪಿಎಚ್ಡಿ ಮೊದಲಾದ ಡಿಗ್ರಿಗಳು ಬೇಡ. ಭಾಷೆ ಮತ್ತು ಸಾಹಿತ್ಯ ನೀಡಿದ ಕೊಡುಗೆಗಳೇ ಸಾಕು ಎನ್ನುವುದಕ್ಕೆ ಇದೆ. ಉದಾಹರಣೆ ಎಂದು ಅಣ್ಣಯ್ಯ ಕುಲಾಲ್ ಹೇಳಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ತಮಾಷೆಗಾಗಿ ಕುಂದಾಪ್ರ ಭಾಷೆ ಸೀಮಿತವಾಗಬಾರದು. ಕುಂದಾಪ್ರ ಭಾಷೆಯಲ್ಲಿದೆ ಅದ್ಬುತ ಜ್ಞಾನ ಭಂಡಾರ. ನಾವಾಡುವ ಭಾಷೆಯನ್ನು ಸಹಜವಾಗಿ ಬಳಸಿದರೆ ಭಾಷೆಯು ಉಳಿಯುತ್ತದೆ ಎಂದರು.</p>.<p>ಕಸಾಪ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಐತಾಳ್ ಮಾತನಾಡಿ, ನಮ್ಮ ಭಾಷೆ ಅಳಿಯುವುದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಪೋಷಕರು ಮಕ್ಕಳಿಗೆ ಕುಂದಾಪುರ ಕನ್ನಡವನ್ನು ಮಾತನಾಡಲು ಪ್ರೇರೇಪಿಸಬೇಕು ಎಂದರು.</p>.<p>ಸಮ್ಮೇಳನಾಧ್ಯಕ್ಷತೆಯನ್ನು ಚೇತನ್ ನೈಲಾಡಿ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಾಯ ಆಚಾರ್ ಉಪಸ್ಥಿತರಿದ್ದರು.</p>.<p>ಶಿಕ್ಷಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಸೃಷ್ಟಿ, ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶಾಶ್ವತ್ ವಂದಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ಸಂಯೋಜಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-28-1467445817</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ಕುಂದಾಪುರ ಭಾಗದವರು ತಮ್ಮೂರಿನಲ್ಲಿ ಇದ್ದಾಗ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಾರೆ. ಅವರ ಸಾಧನೆಗಳ ತಿಳಿಯುವುದೇ ಅವರು ಬೇರೆ ಊರಿನಲ್ಲಿದ್ದಾಗ ಎಂದು ಮಂಗಳೂರಿನ ವೈದ್ಯ ಅಣ್ಣಯ್ಯ ಕುಲಾಲ್ ಹೇಳಿದರು.</p>.<p>ಕೋಟದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಗೀತಾನಂದ ಫೌಂಡೇಶನ್, ಬ್ರಹ್ಮಾವರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರಿನ ಪುಟ್ಟಣ ಕುಲಾಲ್ ಪ್ರತಿಷ್ಠಾನ ಮತ್ತು ಕೋಟತಟ್ಟು ಅರಿವು ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ನಡೆದ ಆರನೇ ಕುಂದಾಪುರ ಕನ್ನಡ ಸಾಹಿತ್ಯ ಸಮ್ಮೇಳನ ‘ಕಾಂಬ’ವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಮಂಗಳೂರಿನಲ್ಲಿ ಬಹುತೇಕ ಮುಂಚೂಣಿಯಲ್ಲಿ ಇರುವವರು ಕುಂದಾಪುರದವರು. ಅಲ್ಲಿನ ಖ್ಯಾತ ವೈದ್ಯರು, ಲೆಕ್ಕಪರಿಶೋಧಕರು ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಮೂಲತಃ ಕುಂದಾಪುರದವರು. ಇಲ್ಲಿನವರ ಮುಖ್ಯ ಗುಣವೆಂದರೆ ತಮ್ಮೊಂದಿಗೆ ಬಂದವರನ್ನು ಎಂದಿಗೂ ಕೈ ಬಿಡುವುದಿಲ್ಲ. ನಂಬಿ ಬಂದವರನ್ನು ಬೆಳೆಸುವುದೇ ಅವರ ಯಶಸ್ಸಿನ ಗುಟ್ಟು ಎಂದರು.</p>.<p>ಈ ಬಾರಿಯ ಸಮ್ಮೇಳನಾಧ್ಯಕ್ಷರನ್ನು ಚೇತನ್ ನೈಲಾಡಿ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದು ಎಲ್ಲರಿಗೂ ಮಾದರಿ. ಸಮ್ಮೇಳನಾಧ್ಯಕ್ಷರಿಗೆ ಯಾವುದೇ ಪಿಎಚ್ಡಿ ಮೊದಲಾದ ಡಿಗ್ರಿಗಳು ಬೇಡ. ಭಾಷೆ ಮತ್ತು ಸಾಹಿತ್ಯ ನೀಡಿದ ಕೊಡುಗೆಗಳೇ ಸಾಕು ಎನ್ನುವುದಕ್ಕೆ ಇದೆ. ಉದಾಹರಣೆ ಎಂದು ಅಣ್ಣಯ್ಯ ಕುಲಾಲ್ ಹೇಳಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ತಮಾಷೆಗಾಗಿ ಕುಂದಾಪ್ರ ಭಾಷೆ ಸೀಮಿತವಾಗಬಾರದು. ಕುಂದಾಪ್ರ ಭಾಷೆಯಲ್ಲಿದೆ ಅದ್ಬುತ ಜ್ಞಾನ ಭಂಡಾರ. ನಾವಾಡುವ ಭಾಷೆಯನ್ನು ಸಹಜವಾಗಿ ಬಳಸಿದರೆ ಭಾಷೆಯು ಉಳಿಯುತ್ತದೆ ಎಂದರು.</p>.<p>ಕಸಾಪ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಐತಾಳ್ ಮಾತನಾಡಿ, ನಮ್ಮ ಭಾಷೆ ಅಳಿಯುವುದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಪೋಷಕರು ಮಕ್ಕಳಿಗೆ ಕುಂದಾಪುರ ಕನ್ನಡವನ್ನು ಮಾತನಾಡಲು ಪ್ರೇರೇಪಿಸಬೇಕು ಎಂದರು.</p>.<p>ಸಮ್ಮೇಳನಾಧ್ಯಕ್ಷತೆಯನ್ನು ಚೇತನ್ ನೈಲಾಡಿ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಾಯ ಆಚಾರ್ ಉಪಸ್ಥಿತರಿದ್ದರು.</p>.<p>ಶಿಕ್ಷಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಸೃಷ್ಟಿ, ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶಾಶ್ವತ್ ವಂದಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ಸಂಯೋಜಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-28-1467445817</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>