ಶಿರೂರು ಮಠದ ಉತ್ತರಾಧಿಕಾರಿ ನೇಮಕದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿರೂರು ಮಠದ ಪ್ರಕರಣಗಳು ಇತ್ಯರ್ಥ ಆಗದೆ, ಶಿಷ್ಯತ್ವ ಸ್ವೀಕರಿಸಲು ಯಾರು ಮುಂದೆ ಬರುತ್ತಿಲ್ಲ. ಪಲಿಮಾರು ಮಠಕ್ಕೆ ಉತ್ತರಾಧಿಕಾರಿ ಸಿಕ್ಕಿದ್ದರೆ, ಪುತ್ತಿಗೆ ಮಠಕ್ಕೂ ಸಿಕ್ಕದರೆ. ಆದರೆ ಶಿರೂರು ಮಠದ ಶಿಷ್ಯರಾಗಲು ಹೆದರುತ್ತಿದ್ದಾರೆ. ಹಾಗಾಗಿ ಮೊದಲು ಮಠದ ಸಮಸ್ಯೆಗಳೆಲ್ಲವೂ ಪರಿಹಾರ ಆಗಬೇಕು. ಆ ನಂತರವೇ ಶಿಷ್ಯ ಸ್ವೀಕಾರದ ಬಗ್ಗೆ ಚಿಂತಿಸುವುದು ಸೂಕ್ತ. ಇದೇ ಕಾರಣಕ್ಕೆ ಶಿರೂರು ಶ್ರೀಗಳ ಬೃಂದಾವನ ನಿರ್ಮಾಣ ಕೂಡ ವಿಳಂಬ ಆಗಿರಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.