ಪಕ್ಷದ ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ‘ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯನ್ನು ಕಾಂಗ್ರೆಸ್ ಅಧಿ
ವೇಶನದಲ್ಲಿ ಮೊದಲು ಘೋಷಿಸಿದವರು ಕಮ್ಯೂನಿಸ್ಟರು. ಅಸಮಾನತೆ, ಬಡತನ, ಅನಕ್ಷರತೆ ನಿರ್ಮೂಲನೆ ಸ್ವಾತಂ
ತ್ರ್ಯದ ಉದ್ದೇಶವಾಗಬೇಕು ಎಂದು ಹೋರಾಡಿದರು. ಸ್ವಾತಂತ್ರ್ಯದ ಬಗ್ಗೆ ಕಮ್ಯುನಿಸ್ಟರಲ್ಲಿ ಸ್ಪಷ್ಟತೆ ಇತ್ತು. ಇದರಿಂದ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರೈತರು, ಕಾರ್ಮಿಕರು ಹೋರಾಡಿ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಭಗತ್ಸಿಂಗ್ ರಷ್ಯಾ ಕ್ರಾಂತಿಯಿಂದ ಸ್ಫೂರ್ತಿ ಪಡೆದಿದ್ದರು ಮುಂದೆ ಅವರ ಸಹಚರರು ಕಮ್ಯುನಿಸ್ಟ್ ಪಕ್ಷ ಸೇರ್ಪಡೆಯಾಗಿರುವುದು ಇತಿಹಾಸವಾಗಿದೆ’ ಎಂದರು.