ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಳಕಿನ ನಮನ

Last Updated 15 ಆಗಸ್ಟ್ 2022, 4:24 IST
ಅಕ್ಷರ ಗಾತ್ರ

ಕುಂದಾಪುರ: ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟ್ ಪಕ್ಷ ಹಾಗೂ ಚಳವಳಿಯು ಅತ್ಯಂತ ಕ್ರಾಂತಿ
ಕಾರಿ ಪಾತ್ರ ವಹಿಸಿತ್ತು’ ಎಂದು ಸಿಪಿಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ ಹೇಳಿದರು.

ಇಲ್ಲಿನ ಹೆಂಚು ಕಾರ್ಮಿಕರ ಭವನದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಳಕಿನ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹರಿಕಿಷನ್ ಸಿಂಗ್ ಸುರ್ಜಿತ್, ಬಾಲಕನಾಗಿದ್ದಾಗ ಪಂಜಾ
ಬ್‌ನ ಅಂದಿನ ಬ್ರಿಟಿಷ್ ಅಧಿಕಾರಿಗಳ ಕಚೇರಿ ಮೇಲಿದ್ದ ಇಂಗ್ಲಿಷ್ ಧ್ವಜ ಇಳಿಸಿ, ಭಾರತದ ರಾಷ್ಟ್ರ ಧ್ವಜ ಹಾರಿಸಿದಾಗ ಗುಂಡೇಟಿನಿಂದ ತಪ್ಪಿಸಿಕೊಂಡು ಕೋರ್ಟ್‌ನಲ್ಲಿ ಬಾಲಕನೆಂಬ ಕಾರಣಕ್ಕಾಗಿ ಮರಣ ದಂಡನೆಯಿಂದ ಪಾರಾಗಿದ್ದರು. ಕೇರಳದ ಸಿಪಿಎಂ ಪಕ್ಷದ ಮುಖಂಡರಾಗಿದ್ದ ಎ.ಕೆ ಗೋಪಾಲನ್, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೇ ಅತೀ ಹೆಚ್ಚು ಕಾಲ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಿದ್ದರು. ಸ್ವಾತಂತ್ರ್ಯ ದಿನದಂದು ಕೂಡ ಗೋಪಾಲನ್ ಅವರು ಬಿಡುಗಡೆ ಆಗಿರಲಿಲ್ಲ ಹಾಗೂ ಕೊನೆವರೆಗೂ ಕಠಿಣ ಶಿಕ್ಷೆ ಅನುಭವಿಸಿದ್ದರೂ ಬ್ರಿಟಿಷರಿಗೆ ತಪ್ಪೋಪ್ಪಿಗೆ ಪತ್ರ ಬರೆದು ಕೊಟ್ಟಿರಲಿಲ್ಲ ಎಂದರು.

ಪಕ್ಷದ ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ‘ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯನ್ನು ಕಾಂಗ್ರೆಸ್ ಅಧಿ
ವೇಶನದಲ್ಲಿ ಮೊದಲು ಘೋಷಿಸಿದವರು ಕಮ್ಯೂನಿಸ್ಟರು. ಅಸಮಾನತೆ, ಬಡತನ, ಅನಕ್ಷರತೆ ನಿರ್ಮೂಲನೆ ಸ್ವಾತಂ
ತ್ರ್ಯದ ಉದ್ದೇಶವಾಗಬೇಕು ಎಂದು ಹೋರಾಡಿದರು. ಸ್ವಾತಂತ್ರ್ಯದ ಬಗ್ಗೆ ಕಮ್ಯುನಿಸ್ಟರಲ್ಲಿ ಸ್ಪಷ್ಟತೆ ಇತ್ತು. ಇದರಿಂದ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರೈತರು, ಕಾರ್ಮಿಕರು ಹೋರಾಡಿ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಭಗತ್‌ಸಿಂಗ್ ರಷ್ಯಾ ಕ್ರಾಂತಿಯಿಂದ ಸ್ಫೂರ್ತಿ ಪಡೆದಿದ್ದರು ಮುಂದೆ ಅವರ ಸಹಚರರು ಕಮ್ಯುನಿಸ್ಟ್ ಪಕ್ಷ ಸೇರ್ಪಡೆಯಾಗಿರುವುದು ಇತಿಹಾಸವಾಗಿದೆ’ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ದೀಪ ಬೆಳಗಿಸಿ ಶ್ರದ್ಧಾಂಜಲಿ ನೀಡಿ ಗೌರವಿಸಲಾಯಿತು.

ಕೆ.ಶಂಕರ್, ಮಹಾಬಲ ವಡೇರಹೋಬಳಿ, ರಾಜು ದೇವಾಡಿಗ, ರವಿ ವಿ.ಎಂ, ಲಕ್ಷ್ಮಣ ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT