ಉಡುಪಿ: ‘ಪ್ರಸಿದ್ಧಿ, ಕೀರ್ತಿ, ಪ್ರಚಾರವನ್ನು ಬದಿಗಿಟ್ಟು ನೋಡಿದರೂ ‘ದೊಡ್ಡ ಮನುಷ್ಯ’ ಎಂದು ಕರೆಯಬಹುದಾದಂತಹ ವ್ಯಕ್ತಿತ್ವ ಉದ್ಯಾವರ ಮಾಧವ ಆಚಾರ್ಯ ಅವರದ್ದು. ಅವರು ಬದುಕಿದ ರೀತಿಯೇ ಅದ್ಭುತ. ಮಾನವೀಯ ಸಂಪನ್ನತೆ, ಸೌಹಾರ್ದ, ಸ್ನೇಹಮಯ ನಡವಳಿಕೆ, ಯಾರನ್ನೂ ನೋಯಿಸದ ಮನೋಧರ್ಮ ಅವರನ್ನು ಬಹಳ ಎತ್ತರದ ಸ್ಥಾನದಲ್ಲಿ ನಿಲ್ಲಿಸಿತ್ತು’ ಎಂದು ಸ್ಮರಿಸಿದರು ಅವರ ಶಿಷ್ಯರಾದ ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿ ಅವರು.