ನಿಯಮಗಳನ್ನು ಉಲ್ಲಂಘಿಸಿ ನೆಟ್ ದಾಟಿ ಬೀಚ್ಗೆ ಇಳಿದವರಿಗೆ ₹ 500 ದಂಡ ವಿಧಿಸಲಾಗುವುದು. ಕಡಲು ಸಾಮಾನ್ಯಸ್ಥಿತಿಗೆ ಬಂದ ಬಳಿಕ ನೆಟ್ ಹಾಗೂ ಕೆಂಪು ಧ್ವಜಗಳನ್ನು ತೆರವುಗೊಳಿಸಿ, ಹಳದಿ ಧ್ವಜಗಳನ್ನು ಹಾಕಲಾಗುವುದು. ಅಲ್ಲಿಯವರೆಗೂ ಪ್ರವಾಸಿಗರು ನೀರಿಗಿಳಿಯುವಂತಿಲ್ಲ ಎಂದು ಬೀಚ್ ನಿರ್ವಹಣಾ ಸಮಿತಿಯ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.