ಪ್ರವಾಸೋದ್ಯಮ ಇಲಾಖೆ ಹೆದ್ದಾರಿ ಬದಿಯಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕುವ ಮೂಲಕ ಸಂಭವನೀಯ ಅಪಘಾತಗಳನ್ನು ತಡೆಯಬಹುದು. ರಾತ್ರಿಯ ಹೊತ್ತು ತ್ರಾಸಿಯಿಂದ ಮರವಂತೆವರೆಗೆ ಹೆದ್ದಾರಿಯಲ್ಲಿ ಬೀದಿದೀಪಗಳು ಹಾಗೂ ಹೈಮಾಸ್ಟ್ ದೀಪಗಳ ವ್ಯವಸ್ಥೆ ಇಲ್ಲವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಜತೆಗೆ, ಕಡಲಿನ ಬದಿಗೆ ಸುರಕ್ಷತಾ ತಡೆಬೇಲಿಯೂ ಇಲ್ಲದಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.