ಕುಂದಾಪುರದ ಬೀಜಾಡಿಯ ಗೋಳಿಬೆಟ್ಟು ನಿವಾಸಿ, ವಿಲಾಸ್ ಮಾರ್ಬಲ್ ಮಾಲಿಕ ರಮೇಶ್ ಆಚಾರ್ ನೇರಂಬಳ್ಳಿ ಅವರ ಪುತ್ರ ವಿರಾಜ್ ಆಚಾರ್(28)ಮೃತಪಟ್ಟವರು. ಕಾಡಿನಕೊಂಡ ನಿವಾಸಿ ನಾರಾಯಣ ಆಚಾರ್ ಪುತ್ರ ರೋಶನ್ ಆಚಾರ್ (23) ನಾಪತ್ತೆಯಾಗಿದ್ದಾರೆ. ಗಾಯಾಳುಗಳನ್ನು ಕಾಡಿನಕೊಂಡ ನಿವಾಸಿ ಕಾರ್ತಿಕ್ (22) ಹಾಗೂ ಬಸ್ರೂರ್ ಮೂರುಕೈ ಬಳಿಯ ಸಂದೇಶ್ (28) ಎಂದು ಗುರುತಿಸಲಾಗಿದೆ. ಈ ಪೈಕಿ ಕಾರ್ತಿಕ್ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.