ನೂತನ ನಿಯಮ ಜಾರಿ: ಇಲ್ಲಿಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬರುವಾಗ ಎಲ್ಲಾ ತರಹದ ಉಡುಪು ಧರಿಸಲು ಅವಕಾಶವಿತ್ತು. ಆದರೆ ಈ ವರ್ಷದ ಜಾತ್ರೆಯಿಂದ ವಸ್ತ್ರಸಂಹಿತೆಯನ್ನು ಪಾಲಿಸಬೇಕು ಎಂದು ವ್ಯವಸ್ಥಾಪನಾ ಸಮಿತಿ ಸೂಚಿಸಿದೆ. ಪುರುಷರು ಪಂಚೆ, ಪ್ಯಾಂಟ್ ಹಾಗೂ ಅಂಗಿ ಹಾಗೂ ಮಹಿಳೆಯರು ಸೀರೆ, ಸಾಂಪ್ರದಾಯಿಕ ಶೈಲಿಯ ಚೂಡಿದಾರ ಧರಿಸಿ ಬರಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿದೆ. ಆಧುನಿಕ ಶೈಲಿಯ ಉಡುಪು ಇತರ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತದೆ, ಹಾಗಾಗಿ ವಸ್ತ್ರಸಂಹಿತೆ ಜಾರಿಗೆ ತರುತ್ತಿದ್ದೇವೆ ಎನ್ನುವುದು ವ್ಯವಸ್ಥಾಪನಾ ಸಮಿತಿಯವರ ವಾದ. ಆದರೆ ಏಕಾಏಕಿ ವಸ್ತ್ರ ಸಂಹಿತೆ ಜಾರಿಗೆ ತರುವುದು ಸರಿಯಲ್ಲ ಎನ್ನುವುದು ಪ್ರಗತಿಪರರ ಅಭಿಪ್ರಾಯವಾಗಿದೆ.