ಚೆಕ್ಪೋಸ್ಟ್ನಲ್ಲಿ ಕ್ವಾರೆಂಟೈನ್ ಕುರಿತು ಅಧಿಕಾರಿಗಳೇ ಗೊಂದಲದಲ್ಲಿದ್ದು, ಸಂಜೆ 3ಗಂಟೆಯವರೆಗೂ ಕಾದು ಸುಸ್ತಾದ ಪ್ರಯಾಣಿಕರು ಸ್ವತಃ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸಮಸ್ಯೆಗೊಳಗಾದ ಪ್ರಯಾಣಿಕರು ದೂರಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದವರನ್ನು ಸರ್ಕಾರಿ ಕ್ವಾರೆಂಟೈನ್ಗೆ ಒಳಪಡಿಸಲಾಗಿದೆಯಾದರೂ, ತಪಾಸಣಾ ಕೇಂದ್ರದಿಂದ ಅವರನ್ನು ಕ್ವಾರೆಂಟೈನ್ ಸ್ಥಳಕ್ಕೆ ಕರೆದೊಯ್ಯುವ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ, ಬಂದ ಕಾರಿನಲ್ಲಿ ಮನೆಗೂ ಹೊಗಲಾಗದೆ ಕಂಗಾಲಾಗಿದ್ದಾರೆ.