ಉಡುಪಿ: ಕೊಡಂಕೂರು ಬಯಲು ಪ್ರದೇಶದ ಜೋಪಡಿಯಲ್ಲಿ ಮಹಿಳೆಯೊಬ್ಬರು ಶನಿವಾರ ಮಗುವಿಗೆ ಜನ್ಮ ನೀಡಿದರು.
ಅಲೆಮಾರಿ ಜನಾಂಗದ ಮಹಿಳೆ ಪ್ರಸವ ವೇದನೆಯಿಂದ ನರಳುವುದನ್ನು ಕಂಡ ಸ್ಥಳೀಯರು ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರು.
ವಿಷಯ ತಿಳಿದ ವಿಶುಶೆಟ್ಟಿ ಆಂಬುಲೆನ್ಸ್ನೊಂದಿಗೆ ಸ್ಥಳಕ್ಕೆ ಧಾವಿಸುವ ಹೊತ್ತಿಗೆ ಮಹಿಳೆ ಜೋಪಡಿಯಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಬಳಿಕ ಆಂಬುಲೆನ್ಸ್ನಲ್ಲಿದ್ದ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು.
ಮಹಿಳೆ ಶಿರಸಿಯ ಜಲಕ್ಕ (24) ಎಂದು ತಿಳಿದು ಬಂದಿದ್ದು, ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಪ್ರಸವ ವೇದನೆ ಕಾಣಿಸಿಕೊಂಡಿದೆ.