ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ– ಮದ್ಯ ಹಂಚಿಕೆಗೆ ಕಡಿವಾಣ ಹಾಕಿದರೆ ಅಭ್ಯಂತರ ಇಲ್ಲ. ಆದರೆ ಜನ ಸಾಮಾನ್ಯರ ದೈನಂದಿನ ಚಟುವಟಿಕೆ ಗಳಿಗೆ ಅಡಚಣೆ ಮಾಡುವಂತಹ ಕ್ರಮ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಒಂದು ಸಂಭ್ರಮ ಇದ್ದಂತೆ. ಅದಕ್ಕೆ ತಡೆಯೊಡ್ಡಲಾಗುತ್ತಿದೆ. ಯಾವು ದೇ ಕಾರ್ಯಕ್ರಮ ಇದ್ದರೂ 48 ಗಂಟೆ ಮೊದಲು ಅನುಮತಿ ಪಡೆಯಿರಿ ಎಂದು ಹೇಳುತ್ತಾರೆ ಎಂದರು.