ಉಡುಪಿ: ಕೈನಲ್ಲಿ ಕೊಳಲು ಹಿಡಿದು, ಬೆಣ್ಣೆ ಮೆಲ್ಲುತ್ತಾ ರಾಜಾಂಗಣದ ತುಂಬೆಲ್ಲ ಮುದ್ದುಕೃಷ್ಣರು ಓಡಾಡುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.
ಕೃಷ್ಣಾಷ್ಟಮಿ ಅಂಗವಾಗಿ ಶುಕ್ರವಾರ ರಾಜಾಂಗಣ ಹಾಗೂ ಅನ್ನಬ್ರಹ್ಮ ಭೋಜನ ಶಾಲೆಯಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದರು. ಮುದ್ದುಕೃಷ್ಣರ ತುಂಟಾಟವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.