ಉಡುಪಿ: ಪಾನ್ಕಾರ್ಡ್ ಅಪ್ಡೇಟ್ ನೆಪದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ ವಂಚಕರು ಆನ್ಲೈನ್ ಮೂಲಕ ₹ 1 ಲಕ್ಷ ದೋಚಿದ್ದಾರೆ
ಕುಂದಾಪುರದ ಸುಧಾಕರ ಕಾಂಚನ್ ವಂಚನೆಗೊಳಗಾದವರು. ಈಚೆಗೆ ಸುಧಾಕರ್ ಅವರ ಮೊಬೈಲ್ಗೆ ಪಾನ್ ಕಾರ್ಡ್ ಅಪ್ಡೇಟ್ ಮಾಡುವಂತೆ ಸಂದೇಶ ಬಂದಿದೆ. ಇದನ್ನು ನಂಬಿ ಲಿಂಕ್ ಕ್ಲಿಕ್ ಮಾಡಿ ವಿವರವನ್ನು ನಮೂದಿಸಿದ್ದಾರೆ. ಬಳಿಕ ಸುಧಾಕರ್ ಖಾತೆಯಿಂದ 1 ಲಕ್ಷ ಕಡಿತವಾಗಿದೆ.
ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.