‘ಚಿತ್ರ, ಶಿಲ್ಪ, ಸಂಗೀತ, ನೃತ್ಯ ಹಾಗೂ ಸಾಹಿತ್ಯವನ್ನು ಒಳಗೊಂಡ ಸಮಷ್ಠಿ ಕಲೆಯಾದ ಯಕ್ಷಗಾನವನ್ನು ಆಸ್ವಾದಿಸುವುದರಿಂದ ಬುದ್ಧಿ, ಭಾವಗಳೆರಡೂ ಸಿದ್ಧಿಸುತ್ತವೆ. ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಗುರುತಿಸಿಕೊಳ್ಳುವ ನೆಲೆಯಲ್ಲಿ ಅಧ್ಯಯನ ಮತ್ತು ಪ್ರದರ್ಶನಗಳು ಶಾಸ್ತ್ರೀಯ ರಂಗದ ಶಿಸ್ತಿಗೆ ಒಳಗಾಗಬೇಕಿದೆ. ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನವನ್ನು ನೋಡಿದ ಕಣ್ಣುಗಳೇ ನೋಡುವುದಕ್ಕಿಂತ ಹೊಸ ಪ್ರೇಕ್ಷಕರನ್ನು ಮುಟ್ಟಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷದೇಗುಲದ ಪ್ರಿಯಾಂಕ ಕೆ.ಮೋಹನ್ ಆಯೋಜಿಸುತ್ತಿರುವ ಯಕ್ಷ ಕಲಿಕಾ ಶಿಬಿರ ಅಭಿನಂದನೀಯ’ ಎಂದರು.