ಕಾಪು (ಪಡುಬಿದ್ರಿ): ಮಲ್ಪೆ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿ ಅಲೆಗಳ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿ ದೋಣಿಯ ಅವಶೇಷಗಳು ಕೈಪುಂಜಾಲು ಕಡಲ ಕಿನಾರೆಯ ದಡಕ್ಕೆ ಬಂದು ಬಿದ್ದಿದೆ.
ಮೀನುಗಾರಿಕಾ ದೋಣಿ ಸಹಿತ ಅದರೊಳಗಿದ್ದ ಬಲೆ, ಎಂಜಿನ್ ಸಹಿತ ಎಲ್ಲ ವಸ್ತುಗಳು ಸಮುದ್ರದ ಪಾಲಾಗಿವೆ. ದೋಣಿಯ ಭಾಗಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕೈಪುಂಜಾಲು ಕೆಂಪುಗುಡ್ಡೆಯಲ್ಲಿ ಹರಡಿಕೊಂಡಿವೆ.
ಮಲ್ಪೆಯ ರಾಕೇಶ್ ಮತ್ತು ಯಶವಂತ್ ಎಂಬವರಿಗೆ ಮೀನುಗಾರಿಕಾ ದೋಣಿ ಸೇರಿದ್ದು, ₹ 15 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.