<p><strong>ಪಡುಬಿದ್ರಿ</strong>: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಶಿಲಾಸೇವೆ ನಿವೇದನೆ ಪತ್ರವನ್ನು ಭಾನುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ ಬಿಡುಗಡೆಗೊಳಿಸಿದರು.</p>.<p>ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ ಮಾತನಾಡಿ, ಏಕಾದಶ ರುದ್ರ ಇರುವ ಕಾರಣ 11 ಸಂಖ್ಯೆಗೆ ಮಹತ್ವ ನೀಡಲಾಗಿದೆ. ಭಗವಂತನ ಆಲಯ ನಿರ್ಮಾಣದಲ್ಲಿ ತನು, ಮನ, ಧನಗಳಿಂದ ಸಹಕರಿಸಿ ದೇವಾಲಯದ ಪುನರ್ನವೀಕರಣದ ಮಹಾಯಜ್ಞದಲ್ಲಿ ತೊಡಗಿಸಿಕೊಳ್ಳಿ ಎಂದರು.</p>.<p>ಆನುವಂಶಿಕ ಮೊಕ್ತೇಸರ ಪಿ. ಭವಾನಿಶಂಕರ ಹೆಗ್ಡೆ ಮಾತನಾಡಿ, ಜೀರ್ಣೋದ್ಧಾರದ ಎಲ್ಲಾ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ. ಮುಂಬೈ, ಬೆಂಗಳೂರು, ಚೆನ್ನೈನಲ್ಲಿರುವ ದೇವಳದ ಭಕ್ತರನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಲು ಶೀಘ್ರ ಅಲ್ಲಿಗೆ ತೆರಳಲಾಗುವುದು ಎಂದರು.</p>.<p>ಗ್ರಾಮದ ಪ್ರತಿ ಮನೆಗೂ ಜೀರ್ಣೋದ್ಧಾರ, ಶಿಲಾಸೇವೆಯ ಮಾಹಿತಿ ನೀಡುವ ಸಲುವಾಗಿ ಗ್ರಾ.ಪಂ. ಸದಸ್ಯರನ್ನು ಒಳಗೊಂಡು ಸಮಿತಿಯೊಂದಿಗೆ ಮನೆ ಭೇಟಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.</p>.<p>ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ, ಅರ್ಚಕ ವೈ. ಗುರುರಾಜ ಭಟ್, ಸಮಿತಿ ಪ್ರಮುಖರಾದ ವೈ. ಸುಕುಮಾರ್, ನವೀನಚಂದ್ರ ಜೆ. ಶೆಟ್ಟಿ, ಪಿ.ಕೆ. ಸದಾನಂದ, ಭಾಸ್ಕರ ಪಡುಬಿದ್ರಿ, ಪ್ರಕಾಶ್ ದೇವಾಡಿಗ ಭಾಗವಹಿಸಿದ್ದರು. ರಾಮಚಂದ್ರ ಆಚಾರ್ಯ ನಿರೂಪಿಸಿದರು.</p>.<p><strong>ಶಿಲಾಸೇವೆ ಸಮರ್ಪಣೆಗೆ ಅವಕಾಶ</strong></p><p> ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ ಮಾತನಾಡಿ ₹30 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಜೀಣೋದ್ಧಾರಗೊಳ್ಳುತ್ತಿರುವ ಜೀರ್ಣೋದ್ಧಾರದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಸಲುವಾಗಿ ಶಿಲಾಸೇವೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಏಕಶಿಲೆಯಿಂದ ಆರಂಭಿಸಿ ಸಹಸ್ರ ಶಿಲೆವರೆಗೂ ಸೇವೆ ನೀಡಬಹುದು. ಶಿಲಾ ಸೇವೆಯೊಂದಕ್ಕೆ ₹1111 ಎರಡು ಶಿಲೆಗಳಿಗೆ ₹2211 ಐದು ಶಿಲೆಗಳಿಗೆ ₹5511 ಹತ್ತು ಶಿಲೆಗಳಿಗೆ ₹11111 ನೂರು ಶಿಲೆಗಳಿಗೆ ₹111111 ಸಾವಿರ ಶಿಲೆಗಳಿಗೆ ₹1111111 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ</strong>: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಶಿಲಾಸೇವೆ ನಿವೇದನೆ ಪತ್ರವನ್ನು ಭಾನುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ ಬಿಡುಗಡೆಗೊಳಿಸಿದರು.</p>.<p>ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ ಮಾತನಾಡಿ, ಏಕಾದಶ ರುದ್ರ ಇರುವ ಕಾರಣ 11 ಸಂಖ್ಯೆಗೆ ಮಹತ್ವ ನೀಡಲಾಗಿದೆ. ಭಗವಂತನ ಆಲಯ ನಿರ್ಮಾಣದಲ್ಲಿ ತನು, ಮನ, ಧನಗಳಿಂದ ಸಹಕರಿಸಿ ದೇವಾಲಯದ ಪುನರ್ನವೀಕರಣದ ಮಹಾಯಜ್ಞದಲ್ಲಿ ತೊಡಗಿಸಿಕೊಳ್ಳಿ ಎಂದರು.</p>.<p>ಆನುವಂಶಿಕ ಮೊಕ್ತೇಸರ ಪಿ. ಭವಾನಿಶಂಕರ ಹೆಗ್ಡೆ ಮಾತನಾಡಿ, ಜೀರ್ಣೋದ್ಧಾರದ ಎಲ್ಲಾ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ. ಮುಂಬೈ, ಬೆಂಗಳೂರು, ಚೆನ್ನೈನಲ್ಲಿರುವ ದೇವಳದ ಭಕ್ತರನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಲು ಶೀಘ್ರ ಅಲ್ಲಿಗೆ ತೆರಳಲಾಗುವುದು ಎಂದರು.</p>.<p>ಗ್ರಾಮದ ಪ್ರತಿ ಮನೆಗೂ ಜೀರ್ಣೋದ್ಧಾರ, ಶಿಲಾಸೇವೆಯ ಮಾಹಿತಿ ನೀಡುವ ಸಲುವಾಗಿ ಗ್ರಾ.ಪಂ. ಸದಸ್ಯರನ್ನು ಒಳಗೊಂಡು ಸಮಿತಿಯೊಂದಿಗೆ ಮನೆ ಭೇಟಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.</p>.<p>ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ, ಅರ್ಚಕ ವೈ. ಗುರುರಾಜ ಭಟ್, ಸಮಿತಿ ಪ್ರಮುಖರಾದ ವೈ. ಸುಕುಮಾರ್, ನವೀನಚಂದ್ರ ಜೆ. ಶೆಟ್ಟಿ, ಪಿ.ಕೆ. ಸದಾನಂದ, ಭಾಸ್ಕರ ಪಡುಬಿದ್ರಿ, ಪ್ರಕಾಶ್ ದೇವಾಡಿಗ ಭಾಗವಹಿಸಿದ್ದರು. ರಾಮಚಂದ್ರ ಆಚಾರ್ಯ ನಿರೂಪಿಸಿದರು.</p>.<p><strong>ಶಿಲಾಸೇವೆ ಸಮರ್ಪಣೆಗೆ ಅವಕಾಶ</strong></p><p> ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ ಮಾತನಾಡಿ ₹30 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಜೀಣೋದ್ಧಾರಗೊಳ್ಳುತ್ತಿರುವ ಜೀರ್ಣೋದ್ಧಾರದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಸಲುವಾಗಿ ಶಿಲಾಸೇವೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಏಕಶಿಲೆಯಿಂದ ಆರಂಭಿಸಿ ಸಹಸ್ರ ಶಿಲೆವರೆಗೂ ಸೇವೆ ನೀಡಬಹುದು. ಶಿಲಾ ಸೇವೆಯೊಂದಕ್ಕೆ ₹1111 ಎರಡು ಶಿಲೆಗಳಿಗೆ ₹2211 ಐದು ಶಿಲೆಗಳಿಗೆ ₹5511 ಹತ್ತು ಶಿಲೆಗಳಿಗೆ ₹11111 ನೂರು ಶಿಲೆಗಳಿಗೆ ₹111111 ಸಾವಿರ ಶಿಲೆಗಳಿಗೆ ₹1111111 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>