<p>ಪಡುಬಿದ್ರಿ: ಡಾಸ್ಕ್ ಟು ಡಾನ್ ಧ್ಯೇಯವಾಕ್ಯದೊಂದಿಗೆ ಪಡುಬಿದ್ರಿ ಮುಖ್ಯ ಬೀಚ್ ರಸ್ತೆಯಿಂದ ಮಲ್ಪೆವರೆಗೆ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ ಏ.4ರಂದು ಸಂಜೆ ಪಡುಬಿದ್ರಿ ಮುಖ್ಯ ಬೀಚ್ನಲ್ಲಿ ಆರಂಭಗೊಳ್ಳಲಿದೆ ಎಂದು ಸಿಎ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪಡುಬಿದ್ರಿ ವ್ಯವಸಾಯಿಕ ಸೊಸೈಟಿಯ ಸಹಯೋಗದಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮೊದಲ ಬಾರಿ ಈ ಸ್ಪರ್ಧೆ ನಡೆಯಲಿದ್ದು, 3 ಕಿಮೀ, 5 ಕಿಮೀ, 10 ಕಿಮೀ, 21 ಕಿಮೀ, 50 ಕಿಮೀ ಮತ್ತು 12 ತಾಸುಗಳ ಓಟ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಹೇಳಿದರು.</p>.<p>ಸ್ಪರ್ಧೆಯ ಶೇ 80ರಷ್ಟು ಓಟ ಕಡಲ ತೀರದ ರಸ್ತೆಯಲ್ಲಿ ಸಾಗಲಿದೆ. ವಿಜೇತರಿಗೆ ಒಟ್ಟು ₹ 4 ಲಕ್ಷದಷ್ಟು ಪುರಸ್ಕಾರ ನೀಡಲಾಗುವುದು ಎಂದರು.</p>.<p>ಪಡುಬಿದ್ರಿ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಓಡು ರನ್ನಿಂಗ್ ಕ್ಲಬ್ನ ದೇವಿಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಶಿಲ್ಪಕಲಾ, ಉದಯ ಶೆಟ್ಟಿ, ಸಂತೋಷ್ ಪೂಜಾರಿ, ಸೊಸೈಟಿ ನಿರ್ದೇಶಕ ರಾಜಾರಾಮ್ ರಾವ್, ಅಶೋಕ್ ಸಾಲ್ಯಾನ್, ಪಿ.ಎಸ್.ಆಚಾರ್, ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-28-284888089</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಡುಬಿದ್ರಿ: ಡಾಸ್ಕ್ ಟು ಡಾನ್ ಧ್ಯೇಯವಾಕ್ಯದೊಂದಿಗೆ ಪಡುಬಿದ್ರಿ ಮುಖ್ಯ ಬೀಚ್ ರಸ್ತೆಯಿಂದ ಮಲ್ಪೆವರೆಗೆ ಅಲ್ಟ್ರಾ ಮ್ಯಾರಥಾನ್ ಓಟದ ಸ್ಪರ್ಧೆ ಏ.4ರಂದು ಸಂಜೆ ಪಡುಬಿದ್ರಿ ಮುಖ್ಯ ಬೀಚ್ನಲ್ಲಿ ಆರಂಭಗೊಳ್ಳಲಿದೆ ಎಂದು ಸಿಎ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪಡುಬಿದ್ರಿ ವ್ಯವಸಾಯಿಕ ಸೊಸೈಟಿಯ ಸಹಯೋಗದಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮೊದಲ ಬಾರಿ ಈ ಸ್ಪರ್ಧೆ ನಡೆಯಲಿದ್ದು, 3 ಕಿಮೀ, 5 ಕಿಮೀ, 10 ಕಿಮೀ, 21 ಕಿಮೀ, 50 ಕಿಮೀ ಮತ್ತು 12 ತಾಸುಗಳ ಓಟ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ಹೇಳಿದರು.</p>.<p>ಸ್ಪರ್ಧೆಯ ಶೇ 80ರಷ್ಟು ಓಟ ಕಡಲ ತೀರದ ರಸ್ತೆಯಲ್ಲಿ ಸಾಗಲಿದೆ. ವಿಜೇತರಿಗೆ ಒಟ್ಟು ₹ 4 ಲಕ್ಷದಷ್ಟು ಪುರಸ್ಕಾರ ನೀಡಲಾಗುವುದು ಎಂದರು.</p>.<p>ಪಡುಬಿದ್ರಿ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಓಡು ರನ್ನಿಂಗ್ ಕ್ಲಬ್ನ ದೇವಿಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಶಿಲ್ಪಕಲಾ, ಉದಯ ಶೆಟ್ಟಿ, ಸಂತೋಷ್ ಪೂಜಾರಿ, ಸೊಸೈಟಿ ನಿರ್ದೇಶಕ ರಾಜಾರಾಮ್ ರಾವ್, ಅಶೋಕ್ ಸಾಲ್ಯಾನ್, ಪಿ.ಎಸ್.ಆಚಾರ್, ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-28-284888089</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>