ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಿತ ಸಂಧಾನ ಸೂತ್ರ ಸಿದ್ಧ: ಪೇಜಾವರ ಶ್ರೀ

ಸುಬ್ರಹ್ಮಣ್ಯ ಮಠ–ದೇವಸ್ಥಾನ ನಡುವಿನ ಗೊಂದಲ:
Last Updated 10 ಜೂನ್ 2019, 15:34 IST
ಅಕ್ಷರ ಗಾತ್ರ

ಉಡುಪಿ: ಸುಬ್ರಹ್ಮಣ್ಯ ಮಠ ಹಾಗೂ ದೇವಸ್ಥಾನ ನಡುವಿನ ಶಾಂತಿ ಸಂಧಾನ ಮಾತುಕತೆ ಪ್ರಗತಿಯಲ್ಲಿದ್ದು, ಎರಡೂ ಕಡೆಯವರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಇಬ್ಬರಿಗೂ ಒಪ್ಪಿತವಾಗುವಂತಹ ಸಂಧಾನ ಸೂತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ತಿಳಿಸಿದ್ದಾರೆ.

ಇನ್ನೊಂದು ಸುತ್ತಿನ ಮಾತುಕತೆಯಲ್ಲಿ ಸಂಧಾನ ಕಾರ್ಯವು ಪೂರ್ಣಗೊಳ್ಳಲಿದ್ದು, ಜೂನ್ 10ರಂದು ನಡೆಯಬೇಕಿದ್ದ ಮಾತುಕತೆ ದೇವಸ್ಥಾನ ಕಮಿಟಿಯ ಅಧ್ಯಕ್ಷರ ವೈಯಕ್ತಿಕ ಅನಾನುಕೂಲಗಳಿಂದ ಮೂಂದೂಡಲಾಗಿದೆ.

ಜೂನ್ 23ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT