ಭಾನುವಾರ ನಗರದ ಮಥುರಾ ಕಂಫರ್ಟ್ ಹೋಟೆಲ್ನಲ್ಲಿ ಮಾತನಾಡಿದ ಸ್ವಾಮೀಜಿ, ರಾಜಕೀಯ ಪಕ್ಷಗಳ ಸಿದ್ಧಾಂತವನ್ನು ಒಪ್ಪಿಕೊಂಡರೂ ಮತ್ತೊಂದು ಜನಾಂಗಕ್ಕೆ ನೋವುಂಟು ಮಾಡುವ ಕೆಲಸಕ್ಕೆ ಕೈಹಾಕಬಾರದು. ಪಕ್ಷಗಳ ಕುಮ್ಮಕ್ಕಿನಿಂದ ಶೋಷಣೆಗೆ ಒಳಗಾಗಬಾರದು. ಸಮುದಾಯಕ್ಕೆ ಸ್ಪಷ್ಟವಾದ ಗುರಿಯಿದ್ದು, ಅದರೆಡೆಗೆ ಮುನ್ನುಗ್ಗಬೇಕು. ಶಿಕ್ಷಣಕ್ಕೆ ವ್ಯಾಪಾರಕ್ಕೆ ಒತ್ತು ಕೊಡಬೇಕು ಎಂದರು.