ಗುಜ್ಜಾಡಿ ನಾಯಕವಾಡಿಯಲ್ಲಿ ಭಾನುವಾರ ಸಂಜೆ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಸಮುದಾಯಗಳ ಪರವಾಗಿ ಅಹವಾಲುಗಳನ್ನು ಮಂಡಿಸಿದ ಭಾಸ್ಕರ ಎಚ್. ಜಿ, ಅಶೋಕ ಎನ್. ಡಿ, ರಾಘವೇಂದ್ರ ಮೇಲ್ಗಂಗೊಳ್ಳಿ, ಮಂಜುನಾಥ, ನಿತೇಶ್, ಇತರರು, ‘ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಮೀನುಗಾರರಿಗೆ ‘ಅ’ ವರ್ಗದ ಸದಸ್ಯತ್ವ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಸಬೇಕು. ಪಂಚಾಯಿತಿಗಳ ಶೇ 25 ಮೀಸಲು ನಿಧಿಯ ಸಮರ್ಪಕ ಬಳಕೆ ಆಗಬೇಕು. ಗಂಗೊಳ್ಳಿ ಲೈಟ್ಹೌಸ್ ಬಳಿ ಸಾರ್ವಜನಿಕ ರುದ್ರಭೂಮಿ ಜಾಗದಲ್ಲಿ ಆಗಿರುವ ಅತಿ
ಕ್ರಮಣ ತೆರವುಗೊಳಿಸಬೇಕು. ಗುಜ್ಜಾಡಿ
ಗ್ರಾಮದ ಲೈಟ್ಹೌಸ್ ಸಮೀಪ ಸರ್ಕಾರಿ ಭೂಮಿ ಕಬಳಿಸಲಾಗಿದ್ದು ಅದರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.