ಉಡುಪಿ: ಭಕ್ತರ ಭಕ್ತಿ, ಭಾವ ಹಾಗೂ ಅಪೇಕ್ಷೆಯಂತೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಆಸ್ಟಿನ್ನಲ್ಲಿ ಭವ್ಯ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಆಸ್ಟಿನ್ ನಗರದಲ್ಲಿ ಕೃಷ್ಣ ಮಂದಿರ ನಿರ್ಮಿಸುವ ಶ್ರೀಗಳ ಸಂಕಲ್ಪಕ್ಕೆ ಭಕ್ತರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ವಿಶ್ವದಾದ್ಯಂತ ಕೃಷ್ಣ ಭಕ್ತಿ ಪ್ರಸಾರದಲ್ಲಿ ನಿರತರಾಗಿರುವ ಶ್ರೀಗಳ ಅಭಿಯಾನದ ಫಲವಾಗಿ ಅಮೆರಿಕದ 10ನೇ ಶ್ರೀಕೃಷ್ಣ ಮಂದಿರವು ಆಸ್ಟಿನ್ ನಗರದಲ್ಲಿ ನಿರ್ಮಾಣವಾಗುತ್ತಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದರು.
2024ರ ಜನವರಿ 18ರಂದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೃಷ್ಣನ ಪೂಜಾ ಪರ್ಯಾಯ ಆರಂಭಿಸಲಿರುವ ಶ್ರೀಗಳು ಆಸ್ಟಿನ್ ನಗರದಲ್ಲಿ ಭವ್ಯ ಕೃಷ್ಣ ಮಂದಿರ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಭಕ್ತರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಕ್ತರಿಗೆ ಶ್ರೀಗಳು ಮುದ್ರಾಧಾರಣೆ ನೆರವೇರಿಸಿದರು.