ಶಿರ್ವ: ಕಟಪಾಡಿ ವಿಶ್ವನಾಥ ದೇಗುಲದ ಬಳಿಯ ಕಲ್ಲಾಪು ಕೆ.ರಾಮಚಂದ್ರ ಪೈ ಎಂಬುವರ ಮನೆಯ ನಿರುಪಯುಕ್ತ ಶೆಡ್ ಒಳಗಡೆ ಎರಡು ಹೆಬ್ಬಾವುಗಳು ಮತ್ತು ಅವುಗಳ 31 ಮೊಟ್ಟೆಗಳು ಪತ್ತೆಯಾಗಿವೆ.
ಭಾರಿ ಗಾತ್ರದ ಎರಡು ಹೆಬ್ಬಾವುಗಳು ಒಂದೇ ಕಡೆ ಮೊಟ್ಟೆಗಳನ್ನು ಇಟ್ಟು ಕಾವು ಕೊಡುತ್ತಿದ್ದವು. ಒಂದು ಹೆಬ್ಬಾವಿನ 16 ಮತ್ತು ಇನ್ನೊಂದು ಹೆಬ್ಬಾವಿನ 16 ಮೊಟ್ಟೆಗಳನ್ನು ಪ್ರತ್ಯೇಕ ಗೊಳಿಸಿ ಎರಡೂ ಹೆಬ್ಬಾವುಗಳನ್ನು ಅರಣ್ಯ ಇಲಾಖಾಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.