ಕೃಷಿ ಕಾರ್ಮಿಕರ ಕೊರತೆ: ಒಂದೆಡೆ ಕೃಷಿ ಕಾರ್ಮಿಕರ ಕೊರತೆಯಿಂದ ಸರಿಯಾದ ಸಮಯದಲ್ಲಿ ಅಡಿಕೆಗೆ ಔಷಧ ಸಿಂಪಡಿಸಲು ಆಗುತ್ತಿಲ್ಲ. ಕೃಷಿ ನಿರ್ವಹಣೆಗೆ ಬಳಸುವ ಗೊಬ್ಬರ, ಔಷಧಗಳ ಬೆಲೆಯೂ ಹೆಚ್ಚಾಗಿದ್ದು, ಅದರೊಂದಿಗೆ ಪ್ರಕೃತಿ ವಿಕೋಪಗಳು ಕೃಷಿಕರಿಗೆ ಸವಾಲಾಗಿವೆ. ಅಕಾಲಿಕ ಮಳೆಯನ್ನು ಗಮನಿಸಿ ನಾಡ್ಪಾಲಿನ ಬಹುತೇಕ ರೈತರು ನಾಲ್ಕು ಬಾರಿ ಔಷಧವನ್ನು ಸಿಂಪಡಿಸಿದ್ದರು. ಆದರೆ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.