ಬೈಕ್, ಕಾರುಗಳಿಗೆ ಹಾನಿ:ಬನ್ನಂಜೆ, ಮೂಡನಿಡಂಬೂರು, ಬೈಲಕೆರೆ, ಕಲ್ಸಂಕ, ಮಠದಬೆಟ್ಟು, ಆದಿ ಉಡುಪಿ ಹಾಗೂ ಕೃಷ್ಣಮಠದ ಸುತ್ತಮುತ್ತಲಿನ ಬಡಾವಣೆಗಳು ಮಳೆಯಿಂದ ಜಲಾವೃತಗೊಂಡಿದ್ದರಿಂದ ಮನೆಯ ಮುಂದೆ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ನೂರಾರು ಬೈಕ್ಗಳು ಹಾಗೂ ಕಾರುಗಳು ಮುಳುಗಿ ಹೆಚ್ಚಿನ ಹಾನಿ ಸಂಭವಿಸಿದೆ. ಕೆಟ್ಟುನಿಂತಿದ್ದ ವಾಹನಗಳನ್ನು ಮಾಲೀಕರು ದುರಸ್ತಿ ಮಾಡಿಸಲು ಗ್ಯಾರೇಜ್ಗಳಿಗೆ ಸಾಗಿಸಿದರು.