ಭಾರಿ ಮಳೆಗೆ ಹೆಬ್ರಿ ತಾಲ್ಲೂಕಿನ ಅಂಡಾರು ವರಂಗದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದ್ದು, ಭತ್ತದ ಕೃಷಿ ನಾಶವಾಗಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 9.2 ಸೆಂ.ಮೀ, ಬ್ರಹ್ಮಾವರ 9.5, ಕಾಪು 4.7, ಕುಂದಾಪುರ 6.7, ಬೈಂದೂರು 8.4, ಕಾರ್ಕಳ 10.4, ಹೆಬ್ರಿಯಲ್ಲಿ 10.3 ಸೆಂ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 8.6 ಸೆಂಮೀ ಮಳೆ ಬಿದ್ದಿದೆ.