ಕಾರ್ಕಳ: ಇಲ್ಲಿನ ಎಸ್ವಿಟಿ ಸರ್ಕಲ್ ಸಮೀಪದ ಅಂಗಡಿ ಮೇಲೆ ಬುಧವಾರ ಅಶ್ವತ್ಥ ಮರವೊಂದು ಬಿದ್ದು ಅಪಾರ ಹಾನಿಯಾಗಿದೆ. ಪಾರ್ಕಿಂಗ್ ಮಾಡಲಾದ ಆಟೊರಿಕ್ಷಾ, ಬ್ಯಾಗ್ ಅಂಗಡಿ, ವಡಾ ಪಾವ್ ಅಂಗಡಿಗಳ ಮೇಲೆ ಮರ ಉರುಳಿ ಬಿದ್ದಿದೆ. ಕೂಡಲೇ ಅರಣ್ಯ ಇಲಾಖೆ, ತಾಲ್ಲೂಕು ಕಚೇರಿ ಸಿಬ್ಬಂದಿ, ಸ್ಥಳೀಯರು ಆಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ.