ಗುರುವಾರ ಸಂಜೆ 6ರಿಂದ 6.30ರವರೆಗೆ ಕೃಷ್ಣನ ಗರ್ಭಗುಡಿಯ ಮುಂದೆ ಉಭಯ ಯತಿಗಳು ರಾಮತಾರಕ ಮಂತ್ರ ಹಾಗೂ ಧನ್ವಂತರಿ ಮಂತ್ರ ಜಪ ಮಾಡಿದರು. ಈ ಸಂದರ್ಭ ವಿಶ್ವಪ್ರಿಯ ತೀರ್ಥ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ, ಲೋಕದ ಒಳಿತಿಗಾಗಿ ಆತ್ಮರಕ್ಷೆಗಾಗಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಕುಳಿತು ರಾಮಧ್ಯಾನ ಮಾಡಬೇಕು. ಶ್ರೀಕೃಷ್ಣ ಮುಖ್ಯಪ್ರಾಣರ ಪ್ರೀತಿಗೆ ಪಾತ್ರರಾಗಬೇಕು ಎಂದರು.