<p><strong>ಕುಂದಾಪುರ</strong>: ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮನಸ್ಸುಗಳನ್ನು ಬೆಸೆಯುತ್ತವೆ. ಆಚರಣೆಗಳ ಮೂಲಕ ಸಮಾಜ ಒಗ್ಗೂಡಲು ಸಾಧ್ಯವಿದೆ ಎಂದು ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಟಿ. ಪೂಜಾರಿ ಹೇಳಿದರು.</p>.<p>ಗುಜ್ಜಾಡಿ ದೊಡ್ಮನೆಯ ಶ್ರೀಯಕ್ಷೆ, ಪಂಜುರ್ಲಿ, ಹಾಯ್ಗುಳಿ ಹಾಗೂ ಪರಿವಾರ ದೈವಸ್ಥಾನದಲ್ಲಿ ದಾನಿಗಳು, ಭಕ್ತರ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಚಾವಣಿ ಉದ್ಘಾಟನೆ, ಸಿರಿಸಿಂಗಾರ ಕೋಲ ಸೇವೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>700 ವರ್ಷಗಳ ಇತಿಹಾಸವಿರುವ ಈ ಕಾರಣಿಕ ದೈವಸ್ಥಾನವನ್ನು ದೊಡ್ಮನೆ ಕುಟುಂಬಸ್ಥರು, ಗ್ರಾಮಸ್ಥರು ನಂಬಿದ್ದು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.</p>.<p>ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಕರಾವಳಿಯ ಜನರು ದೈವ–ದೇವರ ಬಗ್ಗೆ ಅಪಾರ ಶ್ರದ್ಧಾ ಭಕ್ತಿ ಇಟ್ಟುಕೊಂಡವರು. ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಕೋಲ ಸೇವೆಗೆ ಅದರದ್ದೇ ಕಟ್ಟುಪಾಡುಗಳಿದ್ದು, ರಾಜರ ಕಾಲದಲ್ಲೂ ಈ ಸೇವೆ ನಡೆಯುತ್ತಿತ್ತು ಎಂಬ ಉಲ್ಲೇಖವಿದೆ. ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಕೊಂಚ ಬದಲಾವಣೆಗಳಾದರೂ ಮೂಲತತ್ವವನ್ನು ದೈವ ನರ್ತಕರು, ಅರ್ಚಕರು ಪಾಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.</p>.<p>ಹಿಂದಿನ ಕಾಲದಲ್ಲಿ ಕುಟುಂಬದಲ್ಲಿನ ಆರೋಗ್ಯ, ಸಂತಾನ, ಕೃಷಿ ಸಮಸ್ಯೆಗಳು, ಊರಿನ ಸಾಂಕ್ರಾಮಿಕ ರೋಗಗಳು, ಬರಗಾಲ ಮೊದಲಾದ ಸಂಕಷ್ಟಗಳು ಬಂದಾಗ ದೈವ– ದೇವರ ಮೊರೆ ಹೋಗಿ ಹರಕೆ, ಸೇವೆ ಹೇಳಿಕೊಳ್ಳುವುದು ನಂಬಿಕೆಯ ತಳಹದಿಯಾಗಿತ್ತು. ಅದು ಇಂದಿಗೂ ಮುಂದುವರೆದಿದೆ ಎಂದರು.</p>.<p>ದಾನಿಗಳನ್ನು, ಹಿರಿಯರನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ತಮ್ಮಯ್ಯ ದೇವಾಡಿಗ, ಬೆಣ್ಗೇರೆ ನಾಗ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಮೇಸ್ತ, ದೈವಸ್ಥಾನದ ಪಾತ್ರಿ ಸುರೇಶ ಪೂಜಾರಿ, ಅರ್ಚಕ ರವಿ ಸಿ. ಪೂಜಾರಿ ಭಾಗವಹಿಸಿದ್ದರು. ದಿನೇಶ್ ಪೂಜಾರಿ ದೊಡ್ಮನೆ ನಿರೂಪಿಸಿದರು. ಜಯರಾಜ ಪೂಜಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ</strong>: ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮನಸ್ಸುಗಳನ್ನು ಬೆಸೆಯುತ್ತವೆ. ಆಚರಣೆಗಳ ಮೂಲಕ ಸಮಾಜ ಒಗ್ಗೂಡಲು ಸಾಧ್ಯವಿದೆ ಎಂದು ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಟಿ. ಪೂಜಾರಿ ಹೇಳಿದರು.</p>.<p>ಗುಜ್ಜಾಡಿ ದೊಡ್ಮನೆಯ ಶ್ರೀಯಕ್ಷೆ, ಪಂಜುರ್ಲಿ, ಹಾಯ್ಗುಳಿ ಹಾಗೂ ಪರಿವಾರ ದೈವಸ್ಥಾನದಲ್ಲಿ ದಾನಿಗಳು, ಭಕ್ತರ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಚಾವಣಿ ಉದ್ಘಾಟನೆ, ಸಿರಿಸಿಂಗಾರ ಕೋಲ ಸೇವೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>700 ವರ್ಷಗಳ ಇತಿಹಾಸವಿರುವ ಈ ಕಾರಣಿಕ ದೈವಸ್ಥಾನವನ್ನು ದೊಡ್ಮನೆ ಕುಟುಂಬಸ್ಥರು, ಗ್ರಾಮಸ್ಥರು ನಂಬಿದ್ದು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.</p>.<p>ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಕರಾವಳಿಯ ಜನರು ದೈವ–ದೇವರ ಬಗ್ಗೆ ಅಪಾರ ಶ್ರದ್ಧಾ ಭಕ್ತಿ ಇಟ್ಟುಕೊಂಡವರು. ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಕೋಲ ಸೇವೆಗೆ ಅದರದ್ದೇ ಕಟ್ಟುಪಾಡುಗಳಿದ್ದು, ರಾಜರ ಕಾಲದಲ್ಲೂ ಈ ಸೇವೆ ನಡೆಯುತ್ತಿತ್ತು ಎಂಬ ಉಲ್ಲೇಖವಿದೆ. ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಕೊಂಚ ಬದಲಾವಣೆಗಳಾದರೂ ಮೂಲತತ್ವವನ್ನು ದೈವ ನರ್ತಕರು, ಅರ್ಚಕರು ಪಾಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.</p>.<p>ಹಿಂದಿನ ಕಾಲದಲ್ಲಿ ಕುಟುಂಬದಲ್ಲಿನ ಆರೋಗ್ಯ, ಸಂತಾನ, ಕೃಷಿ ಸಮಸ್ಯೆಗಳು, ಊರಿನ ಸಾಂಕ್ರಾಮಿಕ ರೋಗಗಳು, ಬರಗಾಲ ಮೊದಲಾದ ಸಂಕಷ್ಟಗಳು ಬಂದಾಗ ದೈವ– ದೇವರ ಮೊರೆ ಹೋಗಿ ಹರಕೆ, ಸೇವೆ ಹೇಳಿಕೊಳ್ಳುವುದು ನಂಬಿಕೆಯ ತಳಹದಿಯಾಗಿತ್ತು. ಅದು ಇಂದಿಗೂ ಮುಂದುವರೆದಿದೆ ಎಂದರು.</p>.<p>ದಾನಿಗಳನ್ನು, ಹಿರಿಯರನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ತಮ್ಮಯ್ಯ ದೇವಾಡಿಗ, ಬೆಣ್ಗೇರೆ ನಾಗ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಮೇಸ್ತ, ದೈವಸ್ಥಾನದ ಪಾತ್ರಿ ಸುರೇಶ ಪೂಜಾರಿ, ಅರ್ಚಕ ರವಿ ಸಿ. ಪೂಜಾರಿ ಭಾಗವಹಿಸಿದ್ದರು. ದಿನೇಶ್ ಪೂಜಾರಿ ದೊಡ್ಮನೆ ನಿರೂಪಿಸಿದರು. ಜಯರಾಜ ಪೂಜಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>