ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ನೀರಿಗಿಳಿದರೆ ಅಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪ್ರವಾಸಿಗರಿಗೆ ಕಡಲಿನ ಸೆಳೆತದ ಅರಿವು ಇಲ್ಲವಾದ್ದರಿಂದ, ಎಚ್ಚರಿಕೆ ಕಡೆಗಣಿಸಿ ನೀರಿಗಿಳಿಯುತ್ತಿದ್ದಾರೆ. ಪ್ರವಾಸಿಗರ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬೀಚ್ ನಿರ್ವಹಣಾ ಸಮಿತಿಯ ಹಾಗೂ ಮಂತ್ರ ಟೂರಿಸಂ ಡೆವಲಪ್ಮೆಂಟ್ ಸಂಸ್ಥೆಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.