<p><strong>ಕುಂದಾಪುರ</strong>: ‘ಜಿಲ್ಲೆಯಲ್ಲಿ ಹರಿಯುವ 13 ನದಿಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಿಂದ ನೀರಿನ ಬವಣೆಯನ್ನು ನೀಗಿಸುವ ಸಾಕಷ್ಟು ಯೋಜನೆಗಳಿಗೆ ಅವಕಾಶವಿದೆ’ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟರು.</p>.<p>ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಕಾಂಗ್ರೆಸ್ ಮುಖಂಡ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಂಡ್ಲೂರಿನಿಂದ ಸಿದ್ದಾಪುರದವರೆಗೆ ನಡೆದ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘240 ಹೆಕ್ಟೇರ್ ಅರಣ್ಯ ಪ್ರದೇಶಗಳಿಗೆ ಅನುಮತಿ ದೊರಕಿದ್ದರೆ ವಾರಾಹಿ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತು. ಮೂಲ ಯೋಜನೆಯ ಬದಲಾವಣೆಯಲ್ಲಿ ಸಂಸದ ರಾಘವೇಂದ್ರ ಅವರ ಕೊಡುಗೆಯೂ ಇದೆ. ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ನಾಯಕರಿಗೆ ಜನಸೇವೆಯ ಬದ್ದತೆ ಇದೆ’ ಎಂದರು.</p>.<p>‘ಸರ್ಕಾರಿ ಭೂಮಿ ದಬ್ಬಾಳಿಕೆ ಮಾಡುವವರ ವಿರುದ್ದ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿದೆ. ಬಲದಂಡೆ ಯೋಜನೆ ಅನುಷ್ಠಾನವಾಗುವ ವಿಶ್ವಾಸವಿದೆ’ ಎಂದು ತಿಳಿಸಿದರು.</p>.<p>ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ‘ಮಂದಗತಿಯಲ್ಲಿ ಸಾಗುವ ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಲು ಬಿಜೆಪಿ ಸರ್ಕಾರದ ಕೊಡುಗೆ ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ತಿಳಿಸಬೇಕು. ರೈತರ ಪರವಾಗಿ ಇರುವ ಕಾಂಗ್ರೆಸ್ ಕುಟುಂಬವನ್ನು ಒಡೆಯುವ ಪ್ರಯತ್ನವನ್ನು ಮಾಡಬೇಡಿ’ ಎಂದು ಹೇಳಿದರು.</p>.<p>‘ಬಲದಂಡೆ ಯೋಜನೆಗಾಗಿ ₹597 ಕೋಟಿ ಪ್ರಸ್ತಾವನೆಗೆ ಶ್ರಮಿಸಿದ್ದು ನಾನು. ಸಿಎಂ ಹಾಗೂ ಡಿಸಿಎಂ ಯೋಜನೆ ಅನುಷ್ಠಾನದ ಭರವಸೆ ನೀಡಿದ್ದಾರೆ. ₹190 ಅನುದಾನದ ಸಿದ್ಧಾಪುರ ಏತ ನೀರಾವರಿ ಯೋಜನೆಯಲ್ಲಿ 23 ಕಿ.ಮೀ ಪೈಪ್ಲೈನ್ ಕಾಮಗಾರಿ ಆಗಿದ್ದರೂ ಸೀಮಿತ ಪ್ರದೇಶಗಳಿಗೆ ನೀರು ಹೋಗುತ್ತದೆ ಎನ್ನುವ ಸಾಮಾನ್ಯ ಅರಿವು ಬಿಜೆಪಿ ಮುಖಂಡರಿಗೆ ಇಲ್ಲ’ ಎಂದರು.</p>.<p>‘ಶಾಸಕನಾಗಿದ್ದಾಗ ಜಾತಿ ತಾರತಮ್ಯ ಮಾಡಿಲ್ಲ. ಎಲ್ಲಾ ಸಮುದಾಯವರಿಗೂ ದೊರಕಬೇಕಾದ ಗೌರವದ ಬಗ್ಗೆ ಪ್ರಯತ್ನಿಸಿದ್ದೇನೆ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಜಿ.ಶಂಕರ್ ಅವರ ಋಣ ನಮ್ಮ ಮೇಲಿದೆ. ನಾನು ಕೊಟ್ಟಿರುವ ಪತ್ರದಲ್ಲಿರುವ ಅಂಶಗಳಿಗೆ ಪೂರಕವಾಗಿ ತೀರ್ಮಾನಗಳು ಬಂದಲ್ಲಿ, ನಿಮ್ಮ ನಿಲುವು ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ಸ್ಪಷ್ಟಪಡಿಸಬೇಕು’ ಎಂದರು.</p>.<p>ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ‘ಸಿದ್ದಾಪುರ ಏತ ನೀರಾವರಿಯಿಂದ ಸಿದ್ದಾಪುರದ ಎರಡು ವಾರ್ಡ್ಗಳಿಗೆ ಮಾತ್ರ ನೀರು ಹೋಗುತ್ತದೆ. ಬೆರಳೆಣಿಕೆಯ ಜನರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚವಾಗುವ ಸರ್ಕಾರದ ಯೋಜನೆಯ ಡಿಪಿಆರ್ ಬದಲಾವಣೆ ಮಾಡಿ, ಬಿಟ್ಟು ಹೋಗುವ ಪ್ರದೇಶಗಳೂ ಸೇರಿ 4 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರು ಕೊಡಬೇಕು’ ಎಂದು ಹೇಳಿದರು.</p>.<p>‘ಬಿಜೆಪಿ ಅಧಿಕಾರದಲ್ಲಿದ್ದಾಗ ಯಾಕೆ ಬಲದಂಡೆ ಯೋಜನೆ ಆಗಿಲ್ಲ ಎಂದು ಸಂಸದ ಹಾಗೂ ಶಾಸಕರು ಉತ್ತರಿಸಬೇಕು. ಉಪ್ಪು ನೀರು ತಡೆಗೋಡೆ ನಿರ್ಮಾಣದ ಮೂಲಕ ದೂರಗಾಮಿ ಯೋಜನೆಯನ್ನು ತಂದ ಹೆಗ್ಗಳಿಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಇದೆ. ಜಲಜೀವನ್ ಮಿಶನ್ ಯೋಜನೆಯಡಿ ಬೈಂದೂರು ಕ್ಷೇತ್ರದಾದ್ಯಂತ ನಳ್ಳಿ ಕಾಣಿಸುತ್ತಿದ್ದರೂ ಒಂದು ಹನಿ ನೀರು ಬರುತ್ತಿಲ್ಲ’ ಎಂದರು.</p>.<p>ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ವಾರಾಹಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಬಲಾಡಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು.</p>.<p>ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಸೂರಜ್ ಜಿ. ಪೂಜಾರಿ, ಅಶೋಕ್ ಪೂಜಾರಿ ಬೀಜಾಡಿ, ಅರವಿಂದ ಪೂಜಾರಿ ಪಡುಕೋಣೆ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ವಂಡಬಳ್ಳಿ ಜಯರಾಮ್ ಶೆಟ್ಟಿ, ಅನಂತ ಮೊವಾಡಿ, ವಾಸುದೇವ ಪೈ ಸಿದ್ದಾಪುರ, ಹರೀಶ್ ತೋಳಾರ್ ಕೊಲ್ಲೂರು, ರಘುರಾಮ್ ಶೆಟ್ಟಿ ಬಿಜೂರು, ಗಣಪತಿ ಟಿ. ಶ್ರೀಯಾನ್, ಸುದೀಶ್ ಗುಲ್ವಾಡಿ, ಉದಯ ಪೂಜಾರಿ ಚಿತ್ತೂರು, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ದಿನೇಶ್ ನಾಯ್ಕ್ ಹಳ್ಳಿಹೊಳೆ, ನಾಗರಾಜ್ ಗಾಣಿಗ, ಜ್ಯೋತಿ ನಾಯ್ಕ್, ಸೂರ್ಯಕಾಂತಿ ಬೈಂದೂರು, ಹೇಮಾವತಿ ಪೂಜಾರಿ ಹಳ್ಳಿಹೊಳೆ, ಹನೀಫ್ ಗುಲ್ವಾಡಿ, ಅಫ್ಜಲ್ ಹೈಕಾಡಿ, ಮುಸ್ತಾಕ್ ಕಂಡ್ಲೂರು, ಕಾನಿಷ್ಕ ಕೆ ಹೆಗ್ಡೆ ಬೈಲೂರು, ಅಕ್ಷಯ್ ಶೆಟ್ಟಿ, ಭರತ್ ದೇವಾಡಿಗ, ಶೇಖರ ಪೂಜಾರಿ, ಅನೀಶ್ ಪೂಜಾರಿ ಬೈಂದೂರು, ಪ್ರಶಾಂತ ಪೂಜಾರಿ ಕರ್ಕಿ, ಮೋಹನ್ ಪೂಜಾರಿ ಉಪ್ಪುಂದ, ಹರಿಶ್ಚಂದ್ರ ಶೆಟ್ಟಿ ಇದ್ದರು.</p>.<p>ಅಹವಾಲು ಸ್ವೀಕರಿಸಿದ ಡಿಸಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಪ್ರತಿಭಟನನಿರತರೊಂದಿಗೆ ಮಾತುಕತೆ ನಡೆಸಿ, ಬೇಡಿಕೆಯ ಅಹವಾಲು ಸ್ವೀಕರಿಸಿದರು. ರೈತರ ಹಾಗೂ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ವ್ಯಕ್ತಪಡಿಸಿದರು. ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಇದ್ದರು.</p>.<div><blockquote>ಸಕ್ಕರೆ ಕಾರ್ಖಾನೆ ಹೋರಾಟದಲ್ಲಿ ಭಾಗವಹಿಸಿದ ಬಿಜೆಪಿ ಅವರ ಸಖ್ಯ ಬೇಡ ಎಂದು ನಮ್ಮ ನಾಯಕರಿಗೆ ಹೇಳಿದ್ದೆ</blockquote><span class="attribution"> ಸಂಪಿಗೇಡಿ ಸಂಜೀವ ಶೆಟ್ಟಿ, ಅಧ್ಯಕ್ಷರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ</span></div>.<p><strong>‘ತಪ್ಪನ್ನು ಒಪ್ಪಿಕೊಂಡ ಬಿಜೆಪಿ’</strong></p><p>‘2023ರಲ್ಲಿ ಮುಖ್ಯಮಂತ್ರಿಗೆ ನೀಡಿದ್ದ ಪತ್ರವನ್ನು ತಪ್ಪಾಗಿ ವ್ಯಾಖ್ಯಾನ ಮಾಡಿ ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ನಿಲ್ಲಿಸಲು ಗೋಪಾಲ ಪೂಜಾರಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಪಪ್ರಚಾರ ಮಾಡಿತ್ತು.</p><p>ಏತ ನೀರಾವರಿ ಯೋಜನೆಯ ವಿರುದ್ಧ ನಾನಿದ್ದೇನೆ ಎನ್ನುವುದನ್ನು ಸಾಬೀತು ಮಾಡಬೇಕು ಇಲ್ಲವಾದಲ್ಲಿ ಒಂದು ತಿಂಗಳ ಒಳಗೆ ಸಾರ್ವಜನಿಕ ಕ್ಷಮೆ ಕೇಳುವಂತೆ ಬಹಿರಂಗವಾಗಿ ಆಗ್ರಹಿಸಿದ್ದೆ. ಇಲ್ಲಿಯವರೆಗೂ ಮೌನವಾಗಿರುವ ಬಿಜೆಪಿ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಿದೆ’ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ</strong>: ‘ಜಿಲ್ಲೆಯಲ್ಲಿ ಹರಿಯುವ 13 ನದಿಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಿಂದ ನೀರಿನ ಬವಣೆಯನ್ನು ನೀಗಿಸುವ ಸಾಕಷ್ಟು ಯೋಜನೆಗಳಿಗೆ ಅವಕಾಶವಿದೆ’ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟರು.</p>.<p>ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಕಾಂಗ್ರೆಸ್ ಮುಖಂಡ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಂಡ್ಲೂರಿನಿಂದ ಸಿದ್ದಾಪುರದವರೆಗೆ ನಡೆದ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘240 ಹೆಕ್ಟೇರ್ ಅರಣ್ಯ ಪ್ರದೇಶಗಳಿಗೆ ಅನುಮತಿ ದೊರಕಿದ್ದರೆ ವಾರಾಹಿ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತು. ಮೂಲ ಯೋಜನೆಯ ಬದಲಾವಣೆಯಲ್ಲಿ ಸಂಸದ ರಾಘವೇಂದ್ರ ಅವರ ಕೊಡುಗೆಯೂ ಇದೆ. ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ನಾಯಕರಿಗೆ ಜನಸೇವೆಯ ಬದ್ದತೆ ಇದೆ’ ಎಂದರು.</p>.<p>‘ಸರ್ಕಾರಿ ಭೂಮಿ ದಬ್ಬಾಳಿಕೆ ಮಾಡುವವರ ವಿರುದ್ದ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿದೆ. ಬಲದಂಡೆ ಯೋಜನೆ ಅನುಷ್ಠಾನವಾಗುವ ವಿಶ್ವಾಸವಿದೆ’ ಎಂದು ತಿಳಿಸಿದರು.</p>.<p>ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ‘ಮಂದಗತಿಯಲ್ಲಿ ಸಾಗುವ ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಲು ಬಿಜೆಪಿ ಸರ್ಕಾರದ ಕೊಡುಗೆ ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ತಿಳಿಸಬೇಕು. ರೈತರ ಪರವಾಗಿ ಇರುವ ಕಾಂಗ್ರೆಸ್ ಕುಟುಂಬವನ್ನು ಒಡೆಯುವ ಪ್ರಯತ್ನವನ್ನು ಮಾಡಬೇಡಿ’ ಎಂದು ಹೇಳಿದರು.</p>.<p>‘ಬಲದಂಡೆ ಯೋಜನೆಗಾಗಿ ₹597 ಕೋಟಿ ಪ್ರಸ್ತಾವನೆಗೆ ಶ್ರಮಿಸಿದ್ದು ನಾನು. ಸಿಎಂ ಹಾಗೂ ಡಿಸಿಎಂ ಯೋಜನೆ ಅನುಷ್ಠಾನದ ಭರವಸೆ ನೀಡಿದ್ದಾರೆ. ₹190 ಅನುದಾನದ ಸಿದ್ಧಾಪುರ ಏತ ನೀರಾವರಿ ಯೋಜನೆಯಲ್ಲಿ 23 ಕಿ.ಮೀ ಪೈಪ್ಲೈನ್ ಕಾಮಗಾರಿ ಆಗಿದ್ದರೂ ಸೀಮಿತ ಪ್ರದೇಶಗಳಿಗೆ ನೀರು ಹೋಗುತ್ತದೆ ಎನ್ನುವ ಸಾಮಾನ್ಯ ಅರಿವು ಬಿಜೆಪಿ ಮುಖಂಡರಿಗೆ ಇಲ್ಲ’ ಎಂದರು.</p>.<p>‘ಶಾಸಕನಾಗಿದ್ದಾಗ ಜಾತಿ ತಾರತಮ್ಯ ಮಾಡಿಲ್ಲ. ಎಲ್ಲಾ ಸಮುದಾಯವರಿಗೂ ದೊರಕಬೇಕಾದ ಗೌರವದ ಬಗ್ಗೆ ಪ್ರಯತ್ನಿಸಿದ್ದೇನೆ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಜಿ.ಶಂಕರ್ ಅವರ ಋಣ ನಮ್ಮ ಮೇಲಿದೆ. ನಾನು ಕೊಟ್ಟಿರುವ ಪತ್ರದಲ್ಲಿರುವ ಅಂಶಗಳಿಗೆ ಪೂರಕವಾಗಿ ತೀರ್ಮಾನಗಳು ಬಂದಲ್ಲಿ, ನಿಮ್ಮ ನಿಲುವು ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ಸ್ಪಷ್ಟಪಡಿಸಬೇಕು’ ಎಂದರು.</p>.<p>ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ‘ಸಿದ್ದಾಪುರ ಏತ ನೀರಾವರಿಯಿಂದ ಸಿದ್ದಾಪುರದ ಎರಡು ವಾರ್ಡ್ಗಳಿಗೆ ಮಾತ್ರ ನೀರು ಹೋಗುತ್ತದೆ. ಬೆರಳೆಣಿಕೆಯ ಜನರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚವಾಗುವ ಸರ್ಕಾರದ ಯೋಜನೆಯ ಡಿಪಿಆರ್ ಬದಲಾವಣೆ ಮಾಡಿ, ಬಿಟ್ಟು ಹೋಗುವ ಪ್ರದೇಶಗಳೂ ಸೇರಿ 4 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರು ಕೊಡಬೇಕು’ ಎಂದು ಹೇಳಿದರು.</p>.<p>‘ಬಿಜೆಪಿ ಅಧಿಕಾರದಲ್ಲಿದ್ದಾಗ ಯಾಕೆ ಬಲದಂಡೆ ಯೋಜನೆ ಆಗಿಲ್ಲ ಎಂದು ಸಂಸದ ಹಾಗೂ ಶಾಸಕರು ಉತ್ತರಿಸಬೇಕು. ಉಪ್ಪು ನೀರು ತಡೆಗೋಡೆ ನಿರ್ಮಾಣದ ಮೂಲಕ ದೂರಗಾಮಿ ಯೋಜನೆಯನ್ನು ತಂದ ಹೆಗ್ಗಳಿಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಇದೆ. ಜಲಜೀವನ್ ಮಿಶನ್ ಯೋಜನೆಯಡಿ ಬೈಂದೂರು ಕ್ಷೇತ್ರದಾದ್ಯಂತ ನಳ್ಳಿ ಕಾಣಿಸುತ್ತಿದ್ದರೂ ಒಂದು ಹನಿ ನೀರು ಬರುತ್ತಿಲ್ಲ’ ಎಂದರು.</p>.<p>ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ವಾರಾಹಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಬಲಾಡಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು.</p>.<p>ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಸೂರಜ್ ಜಿ. ಪೂಜಾರಿ, ಅಶೋಕ್ ಪೂಜಾರಿ ಬೀಜಾಡಿ, ಅರವಿಂದ ಪೂಜಾರಿ ಪಡುಕೋಣೆ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ವಂಡಬಳ್ಳಿ ಜಯರಾಮ್ ಶೆಟ್ಟಿ, ಅನಂತ ಮೊವಾಡಿ, ವಾಸುದೇವ ಪೈ ಸಿದ್ದಾಪುರ, ಹರೀಶ್ ತೋಳಾರ್ ಕೊಲ್ಲೂರು, ರಘುರಾಮ್ ಶೆಟ್ಟಿ ಬಿಜೂರು, ಗಣಪತಿ ಟಿ. ಶ್ರೀಯಾನ್, ಸುದೀಶ್ ಗುಲ್ವಾಡಿ, ಉದಯ ಪೂಜಾರಿ ಚಿತ್ತೂರು, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ದಿನೇಶ್ ನಾಯ್ಕ್ ಹಳ್ಳಿಹೊಳೆ, ನಾಗರಾಜ್ ಗಾಣಿಗ, ಜ್ಯೋತಿ ನಾಯ್ಕ್, ಸೂರ್ಯಕಾಂತಿ ಬೈಂದೂರು, ಹೇಮಾವತಿ ಪೂಜಾರಿ ಹಳ್ಳಿಹೊಳೆ, ಹನೀಫ್ ಗುಲ್ವಾಡಿ, ಅಫ್ಜಲ್ ಹೈಕಾಡಿ, ಮುಸ್ತಾಕ್ ಕಂಡ್ಲೂರು, ಕಾನಿಷ್ಕ ಕೆ ಹೆಗ್ಡೆ ಬೈಲೂರು, ಅಕ್ಷಯ್ ಶೆಟ್ಟಿ, ಭರತ್ ದೇವಾಡಿಗ, ಶೇಖರ ಪೂಜಾರಿ, ಅನೀಶ್ ಪೂಜಾರಿ ಬೈಂದೂರು, ಪ್ರಶಾಂತ ಪೂಜಾರಿ ಕರ್ಕಿ, ಮೋಹನ್ ಪೂಜಾರಿ ಉಪ್ಪುಂದ, ಹರಿಶ್ಚಂದ್ರ ಶೆಟ್ಟಿ ಇದ್ದರು.</p>.<p>ಅಹವಾಲು ಸ್ವೀಕರಿಸಿದ ಡಿಸಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಪ್ರತಿಭಟನನಿರತರೊಂದಿಗೆ ಮಾತುಕತೆ ನಡೆಸಿ, ಬೇಡಿಕೆಯ ಅಹವಾಲು ಸ್ವೀಕರಿಸಿದರು. ರೈತರ ಹಾಗೂ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ವ್ಯಕ್ತಪಡಿಸಿದರು. ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಇದ್ದರು.</p>.<div><blockquote>ಸಕ್ಕರೆ ಕಾರ್ಖಾನೆ ಹೋರಾಟದಲ್ಲಿ ಭಾಗವಹಿಸಿದ ಬಿಜೆಪಿ ಅವರ ಸಖ್ಯ ಬೇಡ ಎಂದು ನಮ್ಮ ನಾಯಕರಿಗೆ ಹೇಳಿದ್ದೆ</blockquote><span class="attribution"> ಸಂಪಿಗೇಡಿ ಸಂಜೀವ ಶೆಟ್ಟಿ, ಅಧ್ಯಕ್ಷರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ</span></div>.<p><strong>‘ತಪ್ಪನ್ನು ಒಪ್ಪಿಕೊಂಡ ಬಿಜೆಪಿ’</strong></p><p>‘2023ರಲ್ಲಿ ಮುಖ್ಯಮಂತ್ರಿಗೆ ನೀಡಿದ್ದ ಪತ್ರವನ್ನು ತಪ್ಪಾಗಿ ವ್ಯಾಖ್ಯಾನ ಮಾಡಿ ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ನಿಲ್ಲಿಸಲು ಗೋಪಾಲ ಪೂಜಾರಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಪಪ್ರಚಾರ ಮಾಡಿತ್ತು.</p><p>ಏತ ನೀರಾವರಿ ಯೋಜನೆಯ ವಿರುದ್ಧ ನಾನಿದ್ದೇನೆ ಎನ್ನುವುದನ್ನು ಸಾಬೀತು ಮಾಡಬೇಕು ಇಲ್ಲವಾದಲ್ಲಿ ಒಂದು ತಿಂಗಳ ಒಳಗೆ ಸಾರ್ವಜನಿಕ ಕ್ಷಮೆ ಕೇಳುವಂತೆ ಬಹಿರಂಗವಾಗಿ ಆಗ್ರಹಿಸಿದ್ದೆ. ಇಲ್ಲಿಯವರೆಗೂ ಮೌನವಾಗಿರುವ ಬಿಜೆಪಿ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಿದೆ’ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>