ಕಡಿಯಾಳಿಯಲ್ಲಿರುವ ಯು.ಕಮಲಾ ಬಾಯಿ ಸ್ಕೂಲಿನ ವಿದ್ಯಾರ್ಥಿಗಳಾದ ಸಚಿನ್ ಹಾಗೂ ಸಂತೋಷ್ ಶುದ್ಧ ಕುಡಿಯುವ ನೀರಿನ ಮಹತ್ವವನ್ನು ತಿಳಿಸಿದರು. ಪರಿಸರದಲ್ಲಿರುವ ನೀರು ಕುಡಿಯಲು ಯೋಗ್ಯವೇ, ಯಾವ ನೀರನ್ನು ಕುಡಿಯಬೇಕು, ಶುದ್ಧ ನೀರಿನಲ್ಲಿರುವ ಅಂಶಗಳು ಯಾವುವು ಎಂಬುದನ್ನು ಪರೀಕ್ಷೆಯ ಮೂಲಕ ತಿಳಿಸಿದರು. ಇದೇ ಶಾಲೆಯ ವಿನಾಯಕ ಶೇಟ್, ಪ್ರಶಾಂತ್ ಹಸಿರು ಮನೆ ಪರಿಣಾಮದಿಂದ ಜಾಗತಿಕ ತಾಪಮಾನ ಏರಿಕೆ ಕುರಿತು ಮಾಹಿತಿ ನೀಡಿದರು.