ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಮಮತಾ ಮಾತನಾಡಿ, ಆಯುರ್ವೇದವನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ಆಯುರ್ವೇದ ವಿದ್ಯಾರ್ಥಿಗಳು ಹಾಗೂ ವೈದ್ಯರ ಶ್ರಮ ದೊಡ್ಡದು. ಕೇಂದ್ರ ಸರ್ಕಾರದ ‘ಆಜಾದ್ ಕೀ ಅಮೃತ ಮಹೋತ್ಸವ’ ಕಾರ್ಯಕ್ರಮ ಸರಣಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಆಯುರ್ವೇದದ ಜಾಗೃತಿ ಮೂಡಿಸುವ ಯೋಜನೆಯೂ ಶ್ಲಾಘನೀಯ ಎಂದು ಹೇಳಿದರು.