ದನಗಳ್ಳರನ್ನು ಬಿಜೆಪಿ ಶಾಸಕ ಲಾಲಾಜಿ ಮೆಂಡನ್ ರಕ್ಷಿಸಿದ್ದಾರೆ; ಠಾಣೆಗೆ ಕರೆ ಮಾಡಿ ದನಗಳನ್ನು ಬಿಡಿಸಿದ್ದಾರೆ ಎಂಬ ವಿನಯ ಕುಮಾರ್ ಸೊರಕೆ ಅವರ ಆರೋಪ ಸತ್ಯಕ್ಕೆ ದೂರವಾದುದು. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಕಾಪು ಪುರಸಭೆಯಲ್ಲಿ ಎಸ್ಡಿಪಿಐ ಮೂರು ಸ್ಥಾನ ಗೆದ್ದಿರುವುದು ಸೊರಕೆ ಅವರ ನಿದ್ದೆಗೆಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.