ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದ ಉಭಯ ಯತಿಗಳು ರಥಬೀದಿಯಲ್ಲಿರುವ ಚಂದ್ರಮೌಳೇಶ್ವರ ಹಾಗೂ ಅನಂತೇಶ್ವರನ ದೇಗುಲಕ್ಕೆ ತೆರಳಿ ದರ್ಶನ ಮಾಡಿದರು. ಬಳಿಕ ಕೃಷ್ಣಮಠದ ಎದುರು ವೇದವರ್ಧನ ಸ್ವಾಮೀಜಿಗೆ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉಡುಪಿ ಮಲ್ಲಿಗೆ ಮಾಲೆ ಸಹಿತಿ ಅರಳು ಸುರಿದು ಸಂಪ್ರದಾಯದಂತೆ ಸ್ವಾಗತ ಕೋರಿದರು.