ಉಡುಪಿ: ಕಾಪು ಸಮುದ್ರದ 30 ನಾಟಿಕಲ್ ಮೈಲ್ನಲ್ಲಿ ಶನಿವಾರ ಮೀನುಗಾರಿಕಾ ದೋಣಿ ಮುಳುಗಿದ್ದು, ದೋಣಿಯಲ್ಲಿದ್ದ 9 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಮಂಗಳೂರಿನ ಬಶೀರ್ ಎಂಬುವವರ ಮಾಲೀಕತ್ವದ ಎಸ್.ಎಂ. ಫಿಶರೀಸ್ ಹೆಸರಿನ ದೋಣಿ ಶುಕ್ರವಾರ ಮೀನುಗಾರಿಕೆಗೆ ತೆರಳಿತ್ತು. ಕಾಪು ಬಳಿ ದೋಣಿ ಮುಳುಗಲು ಆರಂಭಿಸಿದಾಗ ಸಮೀಪದಲ್ಲಿದ್ದ ಮತ್ತೊಂದು ಎಸ್.ಎಂ. ಫಿಶರೀಸ್ ದೋಣಿ ನೆರವಿಗೆ ಧಾವಿಸಿದೆ. ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.