₹ 38 ಲಕ್ಷ ಸಂಗ್ರಹವಾಗುವಷ್ಟರಲ್ಲಿ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು. ಮಗುವಿನ ಅಗಲಿಕೆಯ ನೋವಿನ ಮಧ್ಯೆಯೂ ಸಮಾಜದಿಂದ ಪಡೆದ ನೆರವನ್ನು ಸಮಾಜಕ್ಕೆ ಮರಳಿಸುವ ನಿರ್ಧಾರ ಮಾಡಿರುವ ದಂಪತಿ ಮಲ್ಪೆಯ ಸಮಾಜ ಸೇವಕ ಈಶ್ವರ್ ಅವರಿಗೆ ₹ 7 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್ ನೀಡಿದ್ದಾರೆ. ಜತೆಗೆ 18 ಬಡ ರೋಗಿಗಳ ₹ 13 ಲಕ್ಷ ಚಿಕಿತ್ಸಾ ವೆಚ್ಚ ಭರಿಸಿದೆ. ಉಳಿದ ಹಣವನ್ನು ಮತ್ತಷ್ಟು ರೋಗಿಗಳ ಚಿಕಿತ್ಸೆಗೆ ವ್ಯಯ ಮಾಡುವುದಾಗಿ ಸಂದೀಪ್ ತಿಳಿಸಿದ್ದಾರೆ.