ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಹೋರಾಟಕ್ಕೆ ಸಿಕ್ಕ ಮಾಸಾಶನ

Last Updated 16 ಮಾರ್ಚ್ 2022, 16:36 IST
ಅಕ್ಷರ ಗಾತ್ರ

ಉಡುಪಿ: ಮಕ್ಕಳಿಂದ ಹಾಗೂ ಕುಟುಂಬದಿಂದ ಪರಿತ್ಯಕ್ತಗೊಂಡು ಜೀವನ ನಿರ್ವಹಣೆ ಸಾಧ್ಯವಾಗದೆ ಪರಿತಪಿಸುತ್ತಿದ್ದ ಸಾಸ್ತಾನ ಮೂಲದ 72 ವರ್ಷದ ಶ್ರೀನಿವಾಸ ತುಂಗರಿಗೆ ಪ್ರತಿತಿಂಗಳು ₹ 9,000 ಮಾಸಾಶನ ನೀಡುವಂತೆ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿ ಆದೇಶಿಸಿದೆ.

ಜೀವನ ನಿರ್ವಹಣೆಗೆ ಕುಟುಂಬದ ಸದಸ್ಯರಿಂದ ಮಾಸಾಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿ, ಶ್ರೀನಿವಾಸ ತುಂಗರಿಗೆ ಅವರ ಮಕ್ಕಳು ತಲಾ ₹ 3 ಸಾವಿರದಂತೆ ಪ್ರತಿ ತಿಂಗಳು ₹ 9 ಸಾವಿರ ಮಾಸಾಶನ ನೀಡುವಂತೆ ಆದೇಶ ನೀಡಿದೆ.

ಆದೇಶವನ್ನು ಅನುಷ್ಠಾನಕ್ಕೆ ತರುವಂತೆ ಜಿಲ್ಲಾ ಹಿರಿಯ ನಾಗರಿಕರ ಕಲ್ಯಾಣ ಮಂಡಳಿಗೆ ನಿರ್ದೇಶನವನ್ನೂ ನೀಡಿದೆ. ‌

ಇಳಿ ವಯಸ್ಸಿನಲ್ಲಿ ಶ್ರೀನಿವಾಸ ತುಂಗರು ಜೀವನ ನಿರ್ವಹಣೆಗೆ ಪಡುತ್ತಿದ್ದ ಕಷ್ಟಗಳನ್ನು ಕಂಡು ಮಾನವ ಹಕ್ಕಗಳ ರಕ್ಷಣಾ ಪ್ರತಿಷ್ಠಾನ ಕಾನೂನು ಹೋರಾಟಕ್ಕೆ ಮುಂದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT