<p><strong>ಕಾರ್ಕಳ:</strong> ವಿದ್ಯಾರ್ಥಿಗಳು ಬರವಣಿಗೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಟಿ.ಎ.ಜಗದೀಶ ಹೇಳಿದರು.</p>.<p>ಇಲ್ಲಿನ ಶ್ರೀಭುವನೇಂದ್ರ ಕಾಲೇಜಿನ 62ನೇ ವಾರ್ಷಿಕಾಂಕ ಚಂದನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಣದ ಮೌಲ್ಯ ಹಾಗೂ ದೃಷ್ಟಿಕೋನದಲ್ಲಿ ಆಗಬೇಕಿರುವ ಬದಲಾವಣೆಗಳು’ ಎಂಬ ವಿಷಯದ ಬಗ್ಗೆ ತೃತೀಯ ಬಿ.ಎ. ವಿದ್ಯಾರ್ಥಿ ಅಜಿತ್ ಲಾಲ್ ಉಪನ್ಯಾಸ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ‘ಕಾಲೇಜಿನ ವಾರ್ಷಿಕಾಂಕವೆಂದರೆ ಅದು ಕೇವಲ ಸಂಚಿಕೆ ಮಾತ್ರವಲ್ಲ, ನೆನಪುಗಳ ಖಜಾನೆ. ಕಾಲೇಜಿನ ಎಲ್ಲ ಕಾರ್ಯಕ್ರಮಗಳೂ, ವಿದ್ಯಾರ್ಥಿ ಬರಹಗಳು, ಪ್ರತಿಭೆ ಇಲ್ಲಿ ಅಡಕವಾಗಿರುತ್ತದೆ’ ಎಂದರು.</p>.<p>ಪ್ರಧಾನ ಸಂಪಾದಕಿ, ಕನ್ನಡ ವಿಭಾಗದ ಮುಖ್ಯಸ್ಥೆ ವನಿತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ, ಐಕ್ಯುಎಸಿ ನಿರ್ದೇಶಕ ಪ್ರೊ. ಎಚ್.ಜಿ.ನಾಗಭೂಷಣ್ ಇದ್ದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ವೇತಾ ನಿರೂಪಿಸಿದರು. ಪ್ರಾರ್ಥನಾ ಸ್ವಾಗತಿಸಿದರು. ಪ್ರೀತಮ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಕಳ:</strong> ವಿದ್ಯಾರ್ಥಿಗಳು ಬರವಣಿಗೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಟಿ.ಎ.ಜಗದೀಶ ಹೇಳಿದರು.</p>.<p>ಇಲ್ಲಿನ ಶ್ರೀಭುವನೇಂದ್ರ ಕಾಲೇಜಿನ 62ನೇ ವಾರ್ಷಿಕಾಂಕ ಚಂದನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಣದ ಮೌಲ್ಯ ಹಾಗೂ ದೃಷ್ಟಿಕೋನದಲ್ಲಿ ಆಗಬೇಕಿರುವ ಬದಲಾವಣೆಗಳು’ ಎಂಬ ವಿಷಯದ ಬಗ್ಗೆ ತೃತೀಯ ಬಿ.ಎ. ವಿದ್ಯಾರ್ಥಿ ಅಜಿತ್ ಲಾಲ್ ಉಪನ್ಯಾಸ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ‘ಕಾಲೇಜಿನ ವಾರ್ಷಿಕಾಂಕವೆಂದರೆ ಅದು ಕೇವಲ ಸಂಚಿಕೆ ಮಾತ್ರವಲ್ಲ, ನೆನಪುಗಳ ಖಜಾನೆ. ಕಾಲೇಜಿನ ಎಲ್ಲ ಕಾರ್ಯಕ್ರಮಗಳೂ, ವಿದ್ಯಾರ್ಥಿ ಬರಹಗಳು, ಪ್ರತಿಭೆ ಇಲ್ಲಿ ಅಡಕವಾಗಿರುತ್ತದೆ’ ಎಂದರು.</p>.<p>ಪ್ರಧಾನ ಸಂಪಾದಕಿ, ಕನ್ನಡ ವಿಭಾಗದ ಮುಖ್ಯಸ್ಥೆ ವನಿತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ, ಐಕ್ಯುಎಸಿ ನಿರ್ದೇಶಕ ಪ್ರೊ. ಎಚ್.ಜಿ.ನಾಗಭೂಷಣ್ ಇದ್ದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ವೇತಾ ನಿರೂಪಿಸಿದರು. ಪ್ರಾರ್ಥನಾ ಸ್ವಾಗತಿಸಿದರು. ಪ್ರೀತಮ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>